ಸುರಕ್ಷಿತವಾಗಿ ಅರಣ್ಯ ಇಲಾಖೆ ಮಡಿಲು ಸೇರಿತು ಹೊಳೆಯಲ್ಲಿ ತೇಲಿ ಬಂದ ಪುಟಾಣಿ!

ಹೊಸದಿಗಂತ ವರದಿ, ಮಡಿಕೇರಿ:

ಹೊಳೆಯಲ್ಲಿ ತೇಲಿ ಬಂದ ಕಾಡಾನೆ ಮರಿಯೊಂದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಕುಟ್ಟ ಸಮೀಪ ಮಂಚಳ್ಳಿ ಎಂಬಲ್ಲಿ ತುಂಬಿ ಹರಿಯುತ್ತಿರುವ ಹೊಳೆಯಲ್ಲಿ ಕಾಡಾನೆ ಮರಿಯೊಂದು ತೇಲಿ ಬಂದಿದ್ದು, ಅಲ್ಲಿನ ನಿವಾಸಿ ರಾಜ ತಿಮ್ಮಯ್ಯ ಅವರ ತೋಟದ ಬಳಿ ಹೊಳೆಯಲ್ಲಿ ಆನೆಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ನೀಡಲಾಗಿದೆ.
ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮರಿಯಾನೆಯನ್ನು ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಬಿಡಲಾಗಿದೆ. ಮೂರು ತಿಂಗಳ ಗಂಡು ಮರಿಯಾನೆ ಸುರಕ್ಷಿತವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!