ದಿನಭವಿಷ್ಯ | ವೃಷಭಕ್ಕೆ ಬಂಧುಗಳಿಂದ ಕಿರಿಕಿರಿ, ಕಟಕಕ್ಕೆ ಪರಿಸ್ಥಿತಿ ಪ್ರತಿಕೂಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ವೃತ್ತಿಯ ಒತ್ತಡವು ಇತರ ಹೊಣೆಗಾರಿಕೆ ಕಡೆಗಣಿಸುವಂತೆ ಮಾಡಬಹುದು. ಆದರೆ ಕೌಟುಂಬಿಕ ಹೊಣೆಗಾರಿಕೆ ಮರೆಯದಿರಿ.

ವೃಷಭ
ಬಾಕಿ ಉಳಿಸಿದ್ದ ಕಾರ್ಯ ಪೂರೈಸಲು ಆದ್ಯತೆ ಕೊಡಿ. ಮತ್ತೆ ಮತ್ತೆ ಅದನ್ನು ಮುಂದೂಡಬೇಡಿ. ಬಂಧುಗಳಿಂದ ಮಾನಸಿಕ ಕಿರಿಕಿರಿ.

ಮಿಥುನ
ಮಾನಸಿಕ ಅಸಹನೆ ಹೆಚ್ಚಬಹುದು. ಅದಕ್ಕೆ ಕಾರಣ ಕೆಲವರ ವರ್ತನೆ. ಅವರೊಡನೆ ಸಂಘರ್ಷಕ್ಕೆ ಇಳಿಯಬೇಡಿ. ಹೊಂದಾಣಿಕೆ ಇರಲಿ.

ಕಟಕ
ಮನಸ್ಸು ಒಪ್ಪದಿದ್ದರೂ ಕೆಲವರ ಮಾತಿಗೆ ತಲೆದೂಗಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಅದು ಅನಿವಾರ್ಯ. ಬಂಧುಗಳಿಂದ ಒತ್ತಡ ಬರಬಹುದು.

ಸಿಂಹ
ಇಂದಿನ ಪರಿಸ್ಥಿತಿ ನಿಮಗೆ ಪ್ರತಿಕೂಲ. ಕೆಲವು ಕಾರ್ಯಗಳು ಸಾಧ್ಯವಾಗದು. ಆದರೆ ನಿರಾಶೆ ಬೇಡ. ಸಂಜೆ ವೇಳೆಗೆ ಎಲ್ಲವೂ ಸುಸ್ಥಿತಿಗೆ ಬರುವುದು.

ಕನ್ಯಾ
ಸಣ್ಣ ಹಿನ್ನಡೆ ನಿರಾಶೆ ತುಂಬದಿರಲಿ. ಅದೆಲ್ಲವೂ ತಾತ್ಕಾಲಿಕ. ಮುಂದೆ ಯಶಸ್ಸಿನ ಹಾದಿ ನಿಮ್ಮ ಮುಂದಿದೆ. ಆಪ್ತರಿಂದ ಸೂಕ್ತ ಸಹಾಯ ಲಭ್ಯ.

ತುಲಾ
ಕುಟುಂಬದಲ್ಲಿ ಹೆಚ್ಚು ಹೊಣೆ ಹೆಗಲೇರುವುದು. ಅದನ್ನು ಜಾರಿಸಲು ಹೋಗದಿರಿ. ಇತರರ ಮನಸ್ತಾಪ ಕಟ್ಟಿಕೊಳ್ಳಬೇಕಾದೀತು.

ವೃಶ್ಚಿಕ
ಸಾಮಾಜಿಕ ಕಾರ್ಯದಲ್ಲಿ ಇಂದು ಹೆಚ್ಚು ತೊಡಗುವಿರಿ. ಮನೆಯ ಪರಿಸರದಲ್ಲಿ ಅಶಾಂತಿ ಉಂಟಾದೀತು. ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ಸಹನೆ ಕಾಯ್ದುಕೊಳ್ಳಿ.

ಧನು
ಇಂದು ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತದೆ. ಆದರೂ ಮನದಲ್ಲಿ ಅಶಾಂತಿ. ಯಾವುದೋ ವಿಚಾರ ಮನಸ್ಸನ್ನು ಕಾಡುತ್ತದೆ. ಅದಕ್ಕೆ ಪರಿಹಾರ ಅಗತ್ಯ.

ಮಕರ
ಕೌಟುಂಬಿಕ ವಾಗ್ವಾದ ಸಂಭವ. ಸಣ್ಣಪುಟ್ಟ ವಿಷಯದಲ್ಲೂ ತಪ್ಪು ಹುಡುಕುವ ನಿಮ್ಮ ಸ್ವಭಾವವೇ ಇದಕ್ಕೆ ಕಾರಣ. ಅದನ್ನು ಬದಲಿಸಿ.

ಕುಂಭ
ನಿಮ್ಮ ಸುತ್ತಲಿನ ಜನರೊಂದಿಗೆ ವಾದವಿವಾದ ನಡೆದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ತಾಳ್ಮೆ ವಹಿಸಿರಿ.

ಮೀನ
ಆಹಾರದಲ್ಲಿ ಹಿತಮಿತ ಸಾಧಿಸಿ. ಇಲ್ಲವಾದರೆ ಹೊಟ್ಟೆ ಸಮಸ್ಯೆಗೆ ಗುರಿಯಾಗುವಿರಿ. ಮನೆಯಲ್ಲಿ ಹಿರಿಯರಿಗೆ ಆರೋಗ್ಯ ಸಮಸ್ಯೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!