ದಿನಭವಿಷ್ಯ | ಇಂದು ಈ ರಾಶಿಯವರು ಶುಭಸುದ್ದಿ ಕೇಳಲಿದ್ದಾರೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ನಿಮ್ಮ ದೇಹಾರೋಗ್ಯ ಕಾಪಾಡಲು ಆದ್ಯತೆ ಕೊಡಿ. ವ್ಯಾಯಾಮ, ಮಿತ ಆಹಾರದಂತಹ ನಿಯಮ ಪಾಲಿಸಿ. ಬಂಧುಗಳಲ್ಲಿ ವಿರಸ ತಪ್ಪಿಸಿರಿ.

ವೃಷಭ
ಅಪ್ತೇಷ್ಟರ ಸಂಗದಲ್ಲಿ ಸಮಯ ಕಳೆಯವಿರಿ. ಅವರ ಹಿತಾಸಕ್ತಿಗೆ ನೀವೂ ಸಹಕರಿಸುವಿರಿ. ಸಂಜೆ ವೇಳೆಗೆ ಖರ್ಚು ಹೆಚ್ಚುವಂತಹ ವಿದ್ಯಮಾನ ಸಂಭವ.

ಮಿಥುನ
ಭಾವುಕತೆ ಮತ್ತು ಲೌಕಿಕ ವಿಚಾರಗಳು ಇಂದು ಸಮಾನ ಆದ್ಯತೆ ಪಡೆಯುತ್ತವೆ. ಕೆಲವು ಆಪ್ತರ ವರ್ತನೆ ಗೊಂದಲ ಸೃಷ್ಟಿಸಬಹುದು.

ಕಟಕ
ನಿಮ್ಮ ಕೆಲವು ಭಾವನೆಗಳು ವಾಸ್ತವಿಕತೆಗೆ ದೂರವಾಗಿವೆ. ಅದನ್ನು ಅತಿಯಾಗಿ ಹಚ್ಚಿಕೊಳ್ಳದಿರಿ. ವೃತ್ತಿಯಲ್ಲಿ ಆರ್ಥಿಕ ಏರುಪೇರು.

ಸಿಂಹ
ಸಣ್ಣ ವಿಷಯಗಳು ದೊಡ್ಡ ತಾಕಲಾಟ ಸೃಷ್ಟಿಸಬಹುದು. ಎಲ್ಲದಕ್ಕೂ ಭಾವುಕವಾಗಿ ಸ್ಪಂದಿಸುವುದು ಬಿಡಿ. ವಾಸ್ತವಿಕ ನೆಲೆಗಟ್ಟಲ್ಲಿ ಯೋಚಿಸಿರಿ.

ಕನ್ಯಾ
ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ ನಿಮಗೆ ದೊರೆಯುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಇತರರ ದ್ವೇಷ ಕಟ್ಟಿಕೊಳ್ಳುವ ಕಾರ್ಯ ಎಸಗದಿರಿ.

ತುಲಾ
ನೀವು ಏನೇ ಕಾರ್ಯ ಮಾಡಿದರೂ ಕೆಲವರನ್ನು ಮೆಚ್ಚಿಸುವುದು ಅಸಾಧ್ಯ.ಅಂತಹ ಕೆಲಸಕ್ಕೆ ಪ್ರಯತ್ನಿಸದಿರುವುದೇ ಒಳಿತು. ನಿಮ್ಮ ಹೊಣೆ ನಿಭಾಯಿಸಿ, ಸಾಕು.

ವೃಶ್ಚಿಕ
ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ಅವರೊಡನೆ ವಾಕ್ಸಮರ ನಡೆದೀತು. ಅತಿರೇಕದಿಂದ ನಡೆದುಕೊಳ್ಳದಿರಿ.

ಧನು
ಪೂರ್ಣ ಮನಸ್ಸಿಟ್ಟು ಕಾರ್ಯ ಎಸಗಬೇಕು. ಅರೆಮನಸ್ಸಿನ ಕಾರ್ಯ ಫಲ ನೀಡದು. ಬಂಧುವಿನಿಂದ ಶುಭಸುದ್ದಿ ಕೇಳುವ ಸಾಧ್ಯತೆಯಿದೆ.

ಮಕರ
ಹೊಸ ಕಾರ್ಯ, ಹೊಸ ಹೊಣೆಗಾರಿಕೆ ಇಂದು ನಿಮ್ಮನ್ನು ಸದಾ ಕಾರ್ಯನಿರತ ಮಾಡುವುದು. ಕೆಲವರ ಚುಚ್ಚು ಮಾತುಗಳಿಗೆ ಕಿವಿಗೊಡದಿರಿ.

ಕುಂಭ
ನಿಮ್ಮ ಮನಸ್ಥಿತಿ ಪದೇಪದೇ ಬದಲಾದೀತು. ಇದರಿಂದ ನಿಮ್ಮ ಆಪ್ತರು ಗೊಂದಲಕ್ಕೆ ಸಿಲುಕುವರು. ಸ್ಥಿರತೆ ಕಾಯ್ದುಕೊಳ್ಳಿ.

ಮೀನ
ಯಾರನ್ನೋ ಮೆಚ್ಚಿಸುವುದಕ್ಕೆ ಯತ್ನಿಸುವಿರಿ. ಅದಕ್ಕೆ ನೂರೆಂಟು ವಿಘ್ನಗಳು. ಕೊನೆಗೂ ನಿಮ್ಮ ಪ್ರಯತ್ನಕ್ಕೆ ಫಲ ಸಿಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!