ದಿನಭವಿಷ್ಯ | ಈ ರಾಶಿಯವರು ಬಹಳಾ ದಿನದಿಂದ ಕಾಯುತ್ತಿದ್ದ ಶುಭಸುದ್ದಿ ಇಂದು ಸಿಗಲಿದೆ

ಮೇಷ
ಅನಿರೀಕ್ಷಿತ ಪ್ರಸಂಗ ಎದುರಿಸುವಿರಿ. ಅದು ನಿಮ್ಮ ಪೂರಕವಾಗಿಯೇ ಇರುವುದು. ದೊಡ್ಡ ಪ್ರಮಾಣದಲ್ಲವಾದರೂ ಅದು ನಿಮ್ಮ ಬದುಕಿಗೆ ಮುಖ್ಯವಾಗಬಹುದು.

ವೃಷಭ
ನಿಭಾಯಿಸಲು ಕಠಿಣ ಎನಿಸಬಲ್ಲ ಕೆಲವು ಸವಾಲು ಎದುರಾಗಬಹಚುದು. ಆದರೆ ದಿನದಂತ್ಯಕ್ಕೆ ಎಲ್ಲವೂ ಸರಳವಾಗಿ ಕೊನೆಗೊಳ್ಳುವುದು.

ಮಿಥುನ
ಧಾರ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಮೊಳೆಯಬಹುದು. ಅದಕ್ಕೆ ನಿಮ್ಮ ಖಾಸಗಿ ಸಮಸ್ಯೆಗಳೂ ಕಾರಣ ಇರಬಹುದು.  ಹಣ ಖರ್ಚು ಹೆಚ್ಚು.

ಕಟಕ
ಇಂದಿನ ದಿನ ಯಾವುದೇ ಸೋಲು, ಹಿನ್ನಡೆ ನಿಮ್ಮನ್ನು ಬಾಧಿಸದು. ಆದರೆ ಈ ದಿನ ನಿಮಗೆ ಬೋರ್ ಎನಿಸ ಬಹುದು. ಏಕತಾನತೆ ಕಾಡಬಹುದು.

ಸಿಂಹ
ಸ್ಪರ್ಧೆಯಲ್ಲಿ , ಪೈಪೋಟಿ ಯಲ್ಲಿ ನಿಮಗೆ ಯಾರೂ ಸ್ಪರ್ಧೆಯಾಗಿ ನಿಲ್ಲಲಾರರು. ವಾದ ದಲ್ಲೂ ಮೇಲುಗೈ. ಕೌಟುಂಬಿಕ ಭಿನ್ನಮತ ಉಂಟಾದೀತು.

ಕನ್ಯಾ
ಪ್ರಮುಖ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಉಂಟಾದೀತು. ಅತೀ ಅವಶ್ಯವೆನಿಸಿದ ಹಣ ಗಳಿಕೆಯಲ್ಲಿ ಸಮಸ್ಯೆ ಎದುರಿಸುವಿರಿ. ಕೌಟುಂಬಿಕ ಅಸಹಕಾರ.

ತುಲಾ
ಧನವೃದ್ಧಿ. ಆರ್ಥಿಕ ವಿಚಾರದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ.  ಭಾವುಕ ಸನ್ನಿವೇಶವೊಂದು ಮನಸ್ಸು ಕಲಕಬಹುದು. ಕೌಟುಂಬಿಕ ಸಹಕಾರ.

ವೃಶ್ಚಿಕ
ನಿಮ್ಮ ಗುರಿಯತ್ತ ನೆಟ್ಟಿರುವ ದೃಷ್ಟಿ ಸಡಿಲಿಸದಿರಿ. ಮನಸ್ಸು ಅತ್ತಿತ್ತ ಸೆಳೆಯಲು ಹಲವು ಕಾರಣಗಳು ಇರಬಹುದಾದರೂ ಅದರಿಂದ ದೂರವಿರಿ.

ಧನು
ಸಮಾನಮನಸ್ಕರ ಜತೆ ಸ್ನೇಹ ವೃದ್ಧಿ. ನಿಮ್ಮ ನಂಬಿಕೆಯನ್ನು ಸಡಿಲಿಸುವಂತಹ ಬೆಳವಣಿಗೆ ಸಂಭವಿಸಬಹುದು. ಆರ್ಥಿಕ ಬಿಕ್ಕಟ್ಟು.

ಮಕರ
ಶುಭಸುದ್ದಿಗೆ ಬಹುದಿನಗಳಿಂದ ಕಾಯುತ್ತಿದ್ದರೆ ಅದು ಇಂದು ಸಿಗಲಿದೆ. ವೃತ್ತಿಯಲ್ಲಿ ಮುನ್ನಡೆ. ಸಮಸ್ಯೆಗಳು ಪರಿಹಾರ, ಧನವೃದ್ಧಿ.

ಕುಂಭ
ಸಮಸ್ಯೆಗಳು ನಿಮ್ಮನ್ನು ಇಂದು ವಿಚಲಿತ ಗೊಳಿಸಲಾರವು. ಏಕೆಂದರೆ ಸಮಸ್ಯೆಗೆ ಸೂಕ್ತ ಪರಿಹಾರವೂ ನಿಮ್ಮಲ್ಲಿದೆ. ಕೌಟುಂಬಿಕ ಸಮಾಧಾನ.

ಮೀನ
ಅನವಶ್ಯ ವೆಚ್ಚ ಕಡಿಮೆ ಮಾಡಿ, ಉಳಿತಾಯಕ್ಕೆ ಗಮನ ಕೊಡುವಿರಿ. ಭಾವನಾತ್ಮಕ ವಿಷಯವೊಂದು ಜಿಜ್ಞಾಸೆಗೆ ಕಾರಣವಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!