ದಿನಭವಿಷ್ಯ: ಹೇಗಿದೆ ಶನಿವಾರದ ನಿಮ್ಮ ರಾಶಿಫಲ

ಮೇಷ
ಉದಾಸ ಭಾವ, ಏಕಾಂಗಿತನ ಕಾಡುವುದು. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡಬಹುದು. ಮನಸ್ಸು ಉಲ್ಲಸಿತ ಗೊಳಿಸಲು ಪ್ರಯತ್ನ.

ವೃಷಭ
ಇಂದು ಸ್ಪಷ್ಟ ಗುರಿ ಮತ್ತು ನಿಖರ ಚಿಂತನೆ ಯೊಂದಿಗೆ ಕಾರ್ಯ ಎಸಗುವಿರಿ. ಹಾಗಾಗಿ ನಿಮ್ಮ ಪ್ರಯತ್ನಗಳಿಗೆ ಇಂದು ಉತ್ತಮ ಫಲ ದೊರಕುವುದು.

ಮಿಥುನ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವಿರಿ. ಮನೆಯಲ್ಲಿನ ಹೊಣೆಗಾರಿಕೆ ಹೆಚ್ಚಿದರೂ ಅದನ್ನು ನಿಭಾಯಿಸುವಿರಿ.

ಕಟಕ
ಉದ್ಯೋಗದಲ್ಲಿ ಅನಿರೀಕ್ಷಿತ ಬೆಳವಣಿಗೆ. ಕುಟುಂಬ ಸದಸ್ಯರನ್ನು ಮೆಚ್ಚಿಸಲು ಕೆಲವು ಕ್ರಮ ತೆಗೆದುಕೊಳ್ಳಬೇಕು. ಈ ಯತ್ನದಲ್ಲಿ ಖರ್ಚು ಹೆಚ್ಚಾಗಬಹುದು.

ಸಿಂಹ
ಹೆಚ್ಚು ಹೊಣೆಗಾರಿಕೆ ಹೆಗಲೇರುವುದು. ಇದನ್ನು ನಿಭಾಯಿಸಲು ಸಿಗುವ ಸಣ್ಣ ಸಹಾಯವೂ ನಿಮಗೆ ದೊಡ್ಡ ಉಪಕಾರನಿಸುವುದು.

ಕನ್ಯಾ
ಭಾವನಾತ್ಮಕ ಏರುಪೇರು ಸಂಭವಿಸಬಹುದು. ಯಾವುದೇ ಪ್ರತಿಕೂಲ ಪರಿಸ್ಥಿತಿ ಎದುರಿಸಲು ಸಜ್ಜಾಗಿರಿ. ಆಪ್ತರೇ ನಿಮ್ಮ ಮೇಲೆ ಆರೋಪ ಹೊರಿಸಬಹುದು.

ತುಲಾ
ವೃತ್ತಿ ಕಾರ್ಯದಲ್ಲಿ ಹೆಚ್ಚು ಎಚ್ಚರ ವಹಿಸಿ. ಕೆಲವರಿಗೆ ನಿಮ್ಮ ಕೆಲಸ ತೃಪ್ತಿ ತರದೇ ಇರಬಹುದು. ಕಾರ್ಯಶೈಲಿ ಬದಲಿಸಲು ಯತ್ನಿಸಿ.

ವೃಶ್ಚಿಕ
ಅತೀ ಭಾವುಕರಾಗಿ ವರ್ತಿಸದಿರಿ. ಅದರಿಂದ ಇತರರ ಮುಂದೆ ಮುಜುಗರಕ್ಕೆ ಸಿಲುಕುವಿರಿ. ಪ್ರಮುಖ ವಿಷಯದಲ್ಲಿ ಇಬ್ಬಂದಿತನ ಎದುರಿಸುವಿರಿ.

ಧನು
ಇತರರ ಸಮಸ್ಯೆ ಪರಿಹಾರಕ್ಕೆ ಮುಂದಾಗುವಿರಿ. ಆದರೆ ವೈಯಕ್ತಿಕ ಸಮಸ್ಯೆ ಕಡೆಗಣಿಸದಿರಿ. ಅದು ನಿಮಗೆ ಸಂಕಷ್ಟ ತಂದೊಡ್ಡಬಹುದು.

ಮಕರ
ಕುಟಂಬದ ಹಿತಾಸಕ್ತಿಗೆ ಹೆಚ್ಚು ಆದ್ಯತೆ ಕೊಡುವಿರಿ. ಅವರ ಬೇಕುಬೇಡಕ್ಕೆ ಸ್ಪಂದಿಸುವಿರಿ. ಸಣ್ಣಪುಟ್ಟ ವಿರಸಗಳು ಇಂದು ಶಮನವಾಗುವವು.

ಕುಂಭ
ಮನಸ್ಸಿನ ತೊಳಲಾಟ ಪರಿಹರಿಸಲು ದೇವರ ಮೊರೆ ಹೋಗುವಿರಿ. ಸಮಸ್ಯೆಯಿಂದ ಪಲಾಯನ ಮಾಡದಿರಿ. ಅದನ್ನು ದಿಟ್ಟವಾಗಿ ಎದುರಿಸಿರಿ.

ಮೀನ
ಖಾಸಗಿ ಬದುಕಿನಲ್ಲಿ ಅಚ್ಚರಿಯ ಬೆಳವಣಿಗೆ ಸಂಭವಿಸುವುದು. ಕೆಲವರು ಎಂದಿಗಿಂತ ವಿಭಿನ್ನ ವರ್ತನೆ ತೋರುವರು. ಆರ್ಥಿಕ ಒತ್ತಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!