ದಿನಭವಿಷ್ಯ| ಯಾವ ರಾಶಿಯವರಿಗೆ ಇಂದು ಶುಭದಿನ

ಮೇಷ
ಬೇಡವೆಂದರೂ ಕೆಲವು ನೆನಪುಗಳು ಕಾಡುವವು. ನಿಮ್ಮಿಂದ ದೂರ ಸರಿದ ಆಪ್ತರ ನೆನಪು ಮಾಡಿಕೊಳ್ಳುವಿರಿ. ಕೌಟುಂಬಿಕ ಶಾಂತಿಗೆ ಧಕ್ಕೆ ತಂದುಕೊಳ್ಳದಿರಿ.

ವೃಷಭ
ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು. ಅನಿರೀಕ್ಷಿತ ನೆರವು ಒದಗುವುದು. ಆಪ್ತರೊಬ್ಬರ ಮಾತಿಗೆ ಬೇಸರಗೊಳ್ಳುವ ಪ್ರಸಂಗ ಉಂಟಾದೀತು.

ಮಿಥುನ
ಹಲವಾರು ಚಿಂತೆಗಳು ಕಾಡಬಹುದು. ಅರರಾಗದಿರಿ. ಒಂದೊಂದಕ್ಕೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿ.

ಕಟಕ
ಹೊಸ ಕಾರ್ಯ ಶುರು ಮಾಡುವ ಮುನ್ನ ಸಾಕಷ್ಟು ಯೋಚಿಸಿ. ಪೂರ್ವಸಿದ್ಧತೆ ಮಾಡಿಕೊಳ್ಳಿ. ಇಲ್ಲವಾದರೆ ದೊಡ್ಡ ಸವಾಲು ಎದುರಾದೀತು

ಸಿಂಹ
ಎಲ್ಲ ಕಾರ್ಯಗಳಲ್ಲೂ ನಿಮಗೆ ಇಂದು ಉದಾಸೀನತೆ ಕಾಡುವುದು. ನಿರಾಸಕ್ತಿ ಬಾಸುವುದು. ಮೈಮನಸ್ಸು ಕೊಡವಿ ಮೇಲೆದ್ದು ನಿಲ್ಲಿ.

ಕನ್ಯಾ
ಕಾರ್ಯದಲ್ಲಿ ನಿರಾಸಕ್ತಿ. ಆದರೆ ಅರೆಮನಸ್ಸಿನಿಂದ ಮಾಡುವ ಕಾರ್ಯ ಫಲ ನೀಡದು ಎಂಬುದನ್ನು ನೀವು ಅರಿತುಕೊಳ್ಳಬೇಕು. ಆಸಕ್ತಿ ಬೆಳೆಸಿಕೊಳ್ಳಿ.

ತುಲಾ
ವೃತ್ತಿ ಮತ್ತು ಕುಟುಂಬ ಎರಡೂ ಕಡೆಗಳಿಂದ ನೀವಿಂದು ಒತ್ತಡ ಎದುರಿಸುವಿರಿ. ಕೆಲವರ ಬೇಡಿಕೆ ಮತ್ತು ನಿರೀಕ್ಷೆ ಈಡೇರಿಸಲು ಕಷ್ಟ ಪಡುವಿರಿ.

ವೃಶ್ಚಿಕ
ಯಾವುದೇ ಕಾರ್ಯ ಗಮನವಿಟ್ಟು ಮಾಡಿ. ನಿಮಗೆ ಉತ್ತಮ ಫಲ ಸಿಕ್ಕೇ ಸಿಗುವುದು. ಇತರರ ಮೇಲೆ ಹೊಣೆಯನ್ನು ಜಾರಿಸದಿರಿ.

ಧನು
ಆಪ್ತರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಮನದಿಂಗಿತ ಈಡೇರುವುದು. ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯ.

ಮಕರ
ಬೇರೆಯವರಿಂದ ಹಣದ ನೆರವು ಕೋರುವ ಮುನ್ನ ಎಚ್ಚರಿಕೆಯಿಂದ ಆಲೋಚಿಸಿ. ಅದು ನಿಮಗೆ ಪ್ರತಿಕೂಲವೇ ಆಗಬಹುದು. ಸಾಲದ ಬಲೆಗೆ ಸಿಲುಕದಿರಿ.

ಕುಂಭ
ಕೌಟುಂಬಿಕ ವಿಚಾರಗಳು ಇಂದು ಆದ್ಯತೆ ಪಡೆಯುತ್ತವೆ. ಮನೆಯವರನ್ನು ತೃಪ್ತಿ ಪಡಿಸುವುದರಲ್ಲೇ ದಿನವು ಕಳೆಯುತ್ತದೆ. ನೆಮ್ಮದಿ ಭಂಗ.

ಮೀನ
ಚಿಂತೆಗೆ ಕಾರಣ ವಾಗುವ ಬೆಳವಣಿಗೆ ಸಂಭವಿಸುವುದು. ಆದರೆ ಅದು ತಾನಾಗಿ ಪರಿಹಾರ ಕಾಣುವುದು. ಇದರಿಂದ ನಿರಾಳತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!