ದಿನಭವಿಷ್ಯ | ಇಂದಿನ ಜಾತಕ ಫಲಗಳು ಹೀಗಿವೆ..

ಮೇಷ
ಪ್ರತಿಯೊಂದು ಕೆಲಸದಲ್ಲಿ ಪರಿಪೂರ್ಣತೆ ಬಯಸುವಿರಿ. ಇತರರಿಂದಲೂ ಅದೇ ನಿರೀಕ್ಷಿಸುವಿರಿ. ಇದರಿಂದ ಕೆಲವರ ಜತೆ ಸಂಘರ್ಷ ಉಂಟಾದೀತು.

ವೃಷಭ
ಕೆಲವು ವಿಷಯಗಳಲ್ಲಿ ಇತರರ ಜತೆಗೆ ಸ್ಪರ್ಧೆಗೆ ಇಳಿಯುವಿರಿ. ನಿಮಗೇ ಉತ್ತಮ ಫಲ ದೊರಕುವ ಬಗ್ಗೆ ಅನುಮಾನ ಬೇಡ. ಕೌಟುಂಬಿಕ ಸಹಕಾರ, ಸಾಮರಸ್ಯ.

ಮಿಥುನ
ಎಲ್ಲ ಒತ್ತಡಗಳನ್ನು ಮರೆತು ನಿರಾಳ ವಾಗಿರಲು ಬಯಸುವಿರಿ. ಆದರೂ ಕೌಟುಂಬಿಕ ಒತ್ತಡ ಕಾಡಬಹುದು. ಬಂಧುಗಳಿಂದ ಹೆಚ್ಚಿನ ಬೇಡಿಕೆ.

ಕಟಕ
ನೆಗೆಟಿವ್ ಚಿಂತನೆಗಳು ನಿಮ್ಮನ್ನು ಇಂದು ಕಾಡಬಹುದು. ಅದಕ್ಕೆ ಕೆಲವು ಪರಿಸ್ಥಿತಿ ಕಾರಣವಾಗುವುದು. ಆದರೆ ಅಂತಹ ಚಿಂತನೆ ಅನವಶ್ಯ.

ಸಿಂಹ
ಆಪ್ತರೊಂದಿಗಿನ ಭಿನ್ನಮತ ನಿವಾರಣೆಗೆ ಒತ್ತು ಕೊಡಿ. ಇಲ್ಲವಾದರೆ ಮನಶ್ಯಾಂತಿ ಹಾಳು. ಅವರ ಭಾವನೆ ಕೂಡ ಅರ್ಥೈಸಿಕೊಳ್ಳಲು ಪ್ರಯತ್ನಿಸಿ.

ಕನ್ಯಾ
ಸಾಧಿಸಲಾಗದ ಕಾರ್ಯಕ್ಕೆ ಕೈ ಹಾಕಬೇಡಿ. ನಿಮ್ಮಿಂದ ಆಗುವಂತಹ ಗುರಿ ಮಾತ್ರ ಇಟ್ಟುಕೊಳ್ಳಿ. ಇಲ್ಲವಾದರೆ ನಿರಾಶೆ ಉಂಟಾದೀತು.

ತುಲಾ
ಬಹುಕಾಲದ ಬಳಿಕ ನಿಮ್ಮ ಮಿತ್ರರನ್ನು ಭೇಟಿಯಾಗುವ ಅವಕಾಶ. ಗತ ನೆನಪುಗಳ ಮರುಕಳಿಕೆ. ಖರೀದಿಯಿಂದ ಹೆಚ್ಚು ಹಣ ಖರ್ಚು.

ವೃಶ್ಚಿಕ
ಕ್ಲಿಷ್ಟಕರ ಪರಿಸ್ಥಿತಿ ಎದುರಾದೀತು. ಏಕಾಂಗಿತನ ಬಾಸುವುದು. ಕೆಲವು ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಒತ್ತಡ.

ಧನು
ಗುರಿ ಸಾಧನೆ. ಉದ್ದೇಶಿಸಿದ ಕಾರ್ಯ ಪೂರ್ಣ. ಹಾಗೆಂದು ಅಹಂಕಾರ ಬೇಡ. ಕಾರ್ಯದಲ್ಲಿ ಇತರರ ಸಹಕಾರ ಮತ್ತು ಪಾತ್ರ ಗೌರವಿಸಿ.

ಮಕರ
ಕೆಲವು ವಿಷಯಗಳಲ್ಲಿ ಕಠಿಣ ನಿಲುವು ತಾಳಬೇಕಾದೀತು. ಮುಲಾಜಿಗೆ ಒಳಗಾಗಿ ನಿಮ್ಮ ಹಿತಾಸಕ್ತಿ ಬಲಿಗೊಡಬೇಡಿ. ಆರ್ಥಿಕ ಅಸ್ಥಿರತೆ.

ಕುಂಭ
ಬಂಧುಬಳಗದ ಜತೆ ಬೆರೆಯುವ ಅವಕಾಶ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು. ಹಣದ ಕೊರತೆ ಕಾಡಿದರೂ ಖರೀದಿ ಉತ್ಸಾಹ ಕುಂದದು.

ಮೀನ
ವಿರಾಮದ ದಿನ. ಉದ್ದೇಶಿತ ಕಾರ್ಯ ಪೂರೈಕೆ. ದಿನದಂತ್ಯಕ್ಕೆ ಎಲ್ಲ ವಿಷಯಗಳೂ ತೃಪ್ತಿಯಿಂದ ಮುಗಿಯುವವು. ಕೌಟುಂಬಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!