ದಿನಭವಿಷ್ಯ | ಈ ರಾಶಿಯವರಿಗೆ ಇಂದು ಅತ್ಯಂತ ಶುಭದಿನ

ಮೇಷ
ನೀವಿಂದು ಯಶ ಸಾಧಿಸಬೇಕಾದರೆ ಸಹನೆ ಮತ್ತು ಶಾಂತಿ ಕಾಯ್ದುಕೊಳ್ಳಬೇಕು. ಇಲ್ಲವಾದರೆ ಕೆಲಸ ಕೆಟ್ಟೀತು. ಇತರರ ಮೇಲೆ ರೇಗಲು ಹೋಗದಿರಿ.

ವೃಷಭ
ಕಷ್ಟಕರ ಕಾರ್ಯವನ್ನೂ ಇಂದು ಸುಲಭದಲ್ಲಿ ಮಾಡಿ ಮುಗಿಸುವಿರಿ. ಮನೆಯಲ್ಲಿ ಉತ್ತಮ ಹೊಂದಾಣಿಕೆ. ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಯಬೇಕಿಲ್ಲ.

ಮಿಥುನ
ನಿಮ್ಮ ಧೈರ್ಯ, ಕಷ್ಟಕಾಲದಲ್ಲಿ ಧೃತಿಗೆಡದಿರುವ ಗುಣ ನಿಮ್ಮ ನೆರವಿಗೆ ಬರುವುದು. ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವಿರಿ.

ಕಟಕ
ಇತರರ ಪ್ರಚೋದನೆಗೆ ಒಳಗಾಗಬೇಡಿ. ನಿಮ್ಮ ಶಾಂತಿ ಹಾಳು ಮಾಡಲು ಕೆಲವರು ಯತ್ನಿಸಬಹುದು. ನೀವು ಸಹನೆಯಿಂದಲೇ ವರ್ತಿಸಿರಿ.

ಸಿಂಹ
ಹಣದ ವಿಚಾರದಲ್ಲಿ ಇಂದು ನಿಮಗೆ ಯಶಸ್ಸು ಕಾದಿದೆ. ಹೂಡಿಕೆಯಿಂದ ಲಾಭ. ಉದ್ಯಮದಲ್ಲಿ ಯಶಸ್ಸು. ಕೌಟುಂಬಿಕ ಬೇಡಿಕೆಗಳನ್ನು ಈಡೇರಿಸುವಿರಿ.

ಕನ್ಯಾ
ಸುಗಮ ಕೆಲಸ. ಎಲ್ಲಾ ಕಾರ್ಯಗಳೂ ಸಲೀಸು. ಯಾವುದೇ ಅಡ್ಡಿ ಬಾಧಿಸದು. ಆದರೆ ಪ್ರೀತಿಯ ವಿಚಾರದಲ್ಲಿ ತುಸು ಹಿನ್ನಡೆ ಎದುರಿಸುವಿರಿ.

ತುಲಾ
ನಿಮ್ಮ ಸಂವಹನ ಕಲೆಯನ್ನು ಹೆಚ್ಚಿಸಬೇಕು.   ನಿಮ್ಮ ಕೆಲವು ಸಮಸ್ಯೆಗಳಿಗೆ ಸರಿಯಾದ ಸಂವಹನ ಇಲ್ಲದಿರುವುದೂ ಕಾರಣ.

ವೃಶ್ಚಿಕ
ಪರಿಣಾಮಕಾರಿಯಾಗಿ ಇಂದು ನಿಮ್ಮ ಕಾರ್ಯವನ್ನು ಎಸಗುವಿರಿ. ಇದರಿಂದ ಎಲ್ಲಾ ಪ್ರಯತ್ನಗಳು ಸಫಲ. ಗುರಿ ಸಾಧನೆ. ಆರ್ಥಿಕ ಸುಧಾರಣೆ.

ಧನು
ಈ ದಿನ ನಿಮಗೆ ಪೂರಕ ಎನಿಸದಿದ್ದರೂ ಹಾನಿಯೂ ಆಗದು. ನೆಗೆಟಿವ್ ಚಿಂತನೆಗಳು ಮನದಲ್ಲಿ ಸುಳಿಯದಂತೆ ನೋಡಿಕೊಳ್ಳಿ. ಕೌಟುಂಬಿಕ ಸೌಹಾರ್ದ.

ಮಕರ
ಫಲಪ್ರದ ದಿನ. ನೀವು ಬಯಸಿದ ಕಾರ್ಯವು ಇಂದು ಈಡೇರುವುದು. ಕೌಟುಂಬಿಕ ಬಾಧ್ಯತೆಯನ್ನು ಈಡೇರಿಸುವಿರಿ. ಬಂಧುಗಳ ಬೆಂಬಲ.

ಕುಂಭ
ಯೋಜನೆ ರೂಪಿಸಿ ಕಾರ್ಯವೆಸಗಿ. ಇಲ್ಲವಾದರೆ ಎಲ್ಲವೂ ಕೆಟ್ಟೀತು. ವಾಗ್ವಾದಗಳಿಂದ, ವಿವಾದಗಳಿಂದ ದೂರವಿರಿ.

ಮೀನ
ಕೆಲಸದ ಬಗ್ಗೆ ಹೆಚ್ಚು ಏಕಾಗ್ರತೆ ಅವಶ್ಯ. ಮನಸ್ಸು ಎತ್ತೆತ್ತಲೋ ಹರಿದಾಡಬಹುದು. ತಂಪು ಆಹಾರ ಸೇವಿಸದಿರುವುದು ಆರೋಗ್ಯಕ್ಕೆ ಒಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!