ದಿನಭವಿಷ್ಯ | ಮಾತನಾಡುವಾಗ ಎಚ್ಚರ ವಹಿಸಿ, ನಿಮ್ಮ ಮಾತೇ ನಿಮಗೆ ಶತ್ರುವಾಗಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ
ವೃತ್ತಿಗೆ ಸಂಬಂಧಿಸಿ  ಪ್ರಯಾಣ ಸಂಭವ. ಆದರೆ ನಿಮ್ಮ ಕಾರ್ಯದಲ್ಲಿ  ಕೆಲವು ತೊಡಕು ಎದುರಿಸುವಿರಿ. ಕೌಟುಂಬಿಕ ಪರಿಸರ ಸೌಹಾರ್ದಪೂರ್ಣ.

ವೃಷಭ
ಆಪ್ತರ ಜತೆಗಿನ ತಪ್ಪಭಿಪ್ರಾಯ ಇಂದು ನಿವಾರಣೆಯಾಗುವುದು. ಕೆಲವು ಅನಿರೀಕ್ಷಿತ ಬೆಳವಣಿಗೆ ನಿಮ್ಮ ವಿಶ್ವಾಸವನ್ನು ಹೆಚ್ಚಿಸಲಿದೆ. ಆರ್ಥಿಕ ಉನ್ನತಿ.

ಮಿಥುನ
ಹದಗೆಟ್ಟ ಸಂಬಂಧ ಸರಿಮಾಡಿಕೊಳ್ಳಲು ಇದು ಸಕಾಲ. ಹೊಂದಾಣಿಕೆಗೆ ಆದ್ಯತೆ ಕೊಡಿ. ಆರೋಗ್ಯದ ಏರುಪೇರು ಸಂಭವ. ಕೆಲಸದಲ್ಲಿ ವಿಳಂಬ.

ಕಟಕ
ದೈಹಿಕ ಸಾಮರ್ಥ್ಯಕ್ಕೆ ಮೀರಿದ ಕೆಲಸಕ್ಕೆ ಕೈಹಾಕದಿರಿ. ಅದರಿಂದ ನಿಮಗೇ ತೊಂದರೆ. ವೃತ್ತಿಯಲ್ಲಿ  ಸಮಸ್ಯೆ ಎದುರಿಸಿದರೂ ಅದು ಪರಿಹಾರ ಕಾಣುವುದು.

ಸಿಂಹ
ಮಾಡುವ ಕೆಲಸ ದಲ್ಲಿ ಪೂರ್ಣ ತೊಡಗಿಸಿಕೊಳ್ಳಿ. ಉದಾಸೀನತೆ ತೊಡೆಯಿರಿ. ಕೌಟುಂಬಿಕ ಬಿಕ್ಕಟ್ಟು ಮನದ ಶಾಂತಿ ಕದಡಬಹುದು.

ಕನ್ಯಾ
ಇತರರ ಜತೆ ಮಾತನಾಡುವಾಗ ಎಚ್ಚರ ವಹಿಸಿ. ನಿಮ್ಮ ಮಾತೇ ನಿಮಗೆ ಶತ್ರುವಾಗಬಹುದು. ಆರ್ಥಿಕ ವಿಷಯ ಕಳವಳ ಸೃಷ್ಟಿಸೀತು.

ತುಲಾ
ಉತ್ತಮ ಫಲ ಸಿಗಲು  ನೀವು ಕಠಿಣ ಕಾರ್ಯ ಮಾಡಬೇಕು. ಉದ್ಯೋಗಕ್ಕೆ ಕಾಯುತ್ತಿರುವವರಿಗೆ  ಪೂರಕ ಬೆಳವಣಿಗೆ. ಮಾನಸಿಕ ನಿರಾಳತೆ.

ವೃಶ್ಚಿಕ
ಹಳೆಯ ತಪ್ಪುಗಳ ಕುರಿತು ಚಿಂತಿಸುತ್ತಾ ಕೂರದಿರಿ. ಮುಂದಿನ ಕಾರ್ಯಗಳತ್ತ ಗಮನ ಹರಿಸಿ. ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಿ. ಆರ್ಥಿಕ ಉನ್ನತಿ.

ಧನು
ಅನಿರೀಕ್ಷಿತ ಧನಲಾಭ. ಆರೋಗ್ಯದ ಕಡೆ ಹೆಚ್ಚು ಎಚ್ಚರ ಅವಶ್ಯ. ಕೆಲಸದಲ್ಲಿ ಹೆಚ್ಚು ಯೋಜನೆಯಿರಲಿ. ಬೇಕಾಬಿಟ್ಟಿ ಕೆಲಸ ಫಲ ನೀಡಲಾರದು.

ಮಕರ
ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮಕ್ಕಳ ಚಿತ್ತ ಇತರ ವಿಷಯಗಳತ್ತ ಹರಿಯದಂತೆ ನೋಡಬೇಕು. ಕೌಟುಂಬಿಕ ಬಿಕ್ಕಟ್ಟು.

ಕುಂಭ
ವೃತ್ತಿಯಲ್ಲಿ ನಿಮಗೆ ಪೂರಕ ದಿನವಲ್ಲ. ಎರಡೆರಡು ಬಾರಿ ಯೋಚಿಸಿ ಕಾರ್ಯವೆಸಗಿ. ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಕೆ ಬೇಡ.

ಮೀನ
ಆರ್ಥಿಕವಾಗಿ ಮುಖ್ಯ ನಿರ್ಧಾರ ತಾಳಬೇಕಾಗುವುದು. ಸಾಂಸಾರಿಕವಾಗಿ ಹೆಚ್ಚಿನ ಏರುಪೇರುಗಳಿಲ್ಲ. ನಿಮ್ಮ ಸಾಧನೆ ನಿಮಗೆ ತೃಪ್ತಿ ತರುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!