ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆಯಲ್ಲಿ ನಡೆಯುತ್ತಿರುವ ಮಹಾನಟಿ ಎನ್ನುವ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ ಸೌಂದರ್ಯ ಸಾವಿನ ಬಗ್ಗೆ ಮಾತನಾಡಿದ್ದಾರೆ.
ನಾನು ಪಂಚತಂತ್ರ ಸಿನಿಮಾ ಶೂಟ್ನಲ್ಲಿದ್ದೆ. ಆಗ ನ್ಯೂಸ್ನಲ್ಲಿ ನಟಿ ಸೌಂದರ್ಯ ಇದ್ದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ನೋಡಿ ಬೆಚ್ಚಿಬಿದ್ದೆ. ಸೌಂದರ್ಯಗೆ ಕ್ಲಾಸ್ಟ್ರೋಫೋಬಿಯಾ ಇತ್ತು. ಲಿಫ್ಟ್, ಸಣ್ಣ ಕೊಠಡಿ ಇನ್ನಿತರ ಚಿಕ್ಕ ಜಾಗಗಳಲ್ಲಿ ಅವರಿಗೆ ಉಸಿರಾಡೋಕೂ ಆಗ್ತಿರ್ಲಿಲ್ಲ. ಆದ್ರೆ ಸೌಂದರ್ಯ ಹೆಲಿಕಾಪ್ಟರ್ ಯಾಕೆ ಹತ್ತಿದ್ರು, ಅಷ್ಟು ಸಣ್ಣ ಜಾಗದಲ್ಲಿ ಹೇಗೆ ಕೂತಿದ್ರು? ಅವಳು ಸತ್ತಿದ್ದಾಳೆ ಅನ್ನೋ ಸುದ್ದಿ ನನಗೆ ನಂಬೋಕೆ ಆಗ್ಲಿಲ್ಲ. ಪದೇ ಪದೆ ಅವಳ ನಂಬರ್ಗೆ ಕಾಲ್ ಮಾಡ್ತಾನೆ ಇದ್ದೆ. ಆ ಕಡೆಯಿಂದ ಅವಳ ದನಿ ಕೇಳಿಸ್ಲೇ ಇಲ್ಲ ಎಂದು ರಮೇಶ್ ಕಣ್ಣೀರಾಗಿದ್ದಾರೆ.
View this post on Instagram