ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡುವ ಸರ್ಕಾರದ ಯೋಜನೆ ಗೃಹಲಕ್ಷ್ಮಿ ಇನ್ನೇನು ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ.
ಇದೇ ಜುಲೈ 14 ರಿಂದ ಗೃಹ ಲಕ್ಷ್ಮೀ ಜಾರಿಗೆ ಸಕಲ ಸಿದ್ಧತೆ ನಡೆದಿದ್ದು, ಬೃಹತ್ ಕಾರ್ಯಕ್ರಮದ ಮೂಲಕ ಗೃಹಲಕ್ಷ್ಮೀ ಆಪ್ ಜಾರಿಮಾಡಲಾಗುತ್ತದೆ. ಫಲಾನುಭವಿ ಮನೆ ಯಜಮಾನಿಯರಿಗೆ ಹಣ ವರ್ಗಾವಣೆ ಮಾಡಲು ಪೋರ್ಟಲ್ ಹಾಗೂ ಆಪ್ ಮೂಲಕ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಿದೆ.
ಗೃಹಲಕ್ಷ್ಮೀ ಹೆಸರಿನಲ್ಲಿ ಪ್ಲೇಸ್ಟೋರ್ನಲ್ಲಿ ಈಗಾಗಲೇ ಸಾಕಷ್ಟು ಆಪ್ಗಳಿವೆ, ಆದರೆ ಇದ್ಯಾವುದೂ ಒರಿಜಿನಲ್ ಅಲ್ಲ, ಸರ್ಕಾರ ಜು.14ರಂದು ಆಪ್ ಲಾಂಚ್ ಮಾಡಲಿದೆ. ಇದರ ಜೊತೆಗೆ ಸೇವಾ ಸಿಂಧು ಪೋರ್ಟಲ್ ಮೂಲಕವೂ ಅರ್ಜಿ ಹಾಕಬಹುದು.
ಬಿಪಿಎಲ್,ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ಗಳಲ್ಲಿ ಮನೆ ಯಜಮಾನಿಯ ಹೆಸರು ಇರಬೇಕು, ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಹಣ ಪಡೆಯಲು ಅವಕಾಶ, ಹಣ ಪಡೆಯುವ ಫಲಾನುಭವಿಯ ಮೊಬೈಲ್ ನಂಬರ್ ನೀಡಬೇಕು. ಬೆಂಗಳೂರು ಒನ್ ಅಥವಾ ಆಪ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ, ಬ್ಯಾಂಕ್ ಅಕೌಂಟ್ನಲ್ಲಿ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಮನೆ ಯಜಮಾನಿ ಅಥವಾ ಅವರ ಪತಿ ತೆರಿಗೆ ಪಾವತಿದಾರರಾಗಿರಬಾರದು.