ಭಾರೀ ಮಳೆಯಿಂದಾಗಿ ಧರೆಗುರುಳಿದ ಬೃಹತ್‌ ಮರ: ರಸ್ತೆ ಸಂಚಾರ ಬಂದ್

ಹೊಸದಿಗಂತ ವರದಿ ಉತ್ತರಕನ್ನಡ: 

ನಿರಂತರವಾಗಿ ಸುರಿಯುತ್ತಿರುವ ಮಳೆಗೆ‌ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಇಂದಿರಾನಗರ ಹತ್ತಿರ ಬೃಹತ್ ಆಕಾರದ ಮರವೊಂದು ರಸ್ತೆಯ ಮೇಲೆ ಬಿದ್ದು ಎರಡು ಗಂಟೆಗೂ ಹೆಚ್ವು ಹೊತ್ತು ಹುಬ್ಬಳ್ಳಿ-ಶಿರಸಿ ರಸ್ತೆ ಸಂಚಾರ ಬಂದ್ ಆಗಿತ್ತು.

ಮಳಗಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆಯ ಪಕ್ಕದಲ್ಲಿರುವ ಬೃಹತ್ ಆಕಾರದ ಮರವೊಂದು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಇದರಿಂದ ರಾತ್ರಿ ಸುಮಾರು ಒಂದು ಕಿಲೋಮೀಟರೆವರೆಗೂ ವಾಹನಗಳು ಮುಂದೆ ಹೋಗದೆ ಟ್ರಾಫಿಕ್‌ ಜಾಮ್‌ ಆಗಿತ್ತು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಬಿದ್ದ ಮರವನ್ನು ತೆರವು ಮಾಡಿ ವಾಹನ ಸವಾರರಿಗೆ ಸುಗಮವಾಗಿ ಓಡಾಡುವಂತೆ ಅನುಕುಲ ಮಾಡಿಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!