ಹೊಸ ದಿಗಂತ ವರದಿ, ವಿಜಯಪುರ:
ಮುಂದಿನ ಮುಖ್ಯಮಂತ್ರಿ ನಾನೇ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಮಾತನಾಡಿ, ಯಾಕೇ ನಾನು ಮುಖ್ಯಮಂತ್ರಿ ಆಗಬಾರದಾ..? ಮುಖ್ಯಮಂತ್ರಿ ಆಗುವ ಅರ್ಹತೆ ನನಗೆ ಇದೆ. ನನ್ಮೇಲೆ ಗಣಿ, ಅಕ್ರಮ ಆಸ್ತಿ, ಜಾತಿ ಆರೋಪ ಇಲ್ಲ ಎಂದರು.
ಪ್ರಧಾನಿ ಮೋದಿ ಮನಸ್ಸು ಮಾಡಿದರೆ ನಾನೇ ಮುಖ್ಯಮಂತ್ರಿ. ಅಲ್ಲದೇ, 130 ಸೀಟ್ ತರುವ ತಾಕತ್ತು ನನಗೆ ಇದೆ. ಹೈಕಮಾಂಡ್ ಅವಕಾಶ ನೀಡಿದರೆ ನಾನು ಚುನಾವಣೆ ನೇತೃತ್ವ ವಹಿಸುತ್ತೆನೆ ಎಂದರು.