ಬಿಸಿಲಿದೆ ಗೊತ್ತು, ಅಡ್ಜಸ್ಟ್‌ ಮಾಡ್ಕೊಂಡು ಬಂದು ವೋಟ್‌ ಮಾಡಿ.. ಇದು ನಮ್ಮ ಕರ್ತವ್ಯ: ಅಲ್ಲು ಅರ್ಜುನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ವೋಟ್‌ ಮಾಡಿಬಂದ ನಟ ಅಲ್ಲು ಅರ್ಜುನ್‌ ಎಲ್ಲರಿಗೂ ವೋಟ್‌ ಮಾಡುವಂತೆ ಮನವಿ ಮಾಡಿದ್ದಾರೆ.

ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಬಂದು ತಮ್ಮ ವೋಟ್ ಚಲಾಯಿಸುತ್ತಿದ್ದಾರೆ. ಮತದಾನದ ಬಳಿಕ ಎಲ್ಲಾ ಸೆಲೆಬ್ರಿಟಿಗಳು ವೋಟ್ ಮಾಡುವಂತೆ ಅಭಿಮಾನಿಗಳ ಬಳಿ ಕೋರಿದ್ದಾರೆ. ಅದೇ ರೀತಿ ಅಲ್ಲು ಅರ್ಜುನ್ ಅವರು ಕೂಡ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಮತವನ್ನು ಹಾಕಿ. ಇದು ನಮಗೆ ನಿಜಕ್ಕೂ ಜವಾಬ್ದಾರಿಯುತ ದಿನ. ಹೊರಗೆ ತುಂಬಾ ಬಿಸಿಲು ಇದೆ. ಸ್ವಲ್ಪ ಹೆಚ್ಚಿನ ಶ್ರಮ ಹಾಕಿ. ದೇಶದ ಮುಂದಿನ ಐದು ವರ್ಷಗಳಿಗೆ ಇದು ನಿರ್ಣಾಯಕ ದಿನ, ಬಿಸಿಲಿದೆ ಗೊತ್ತು, ಅಡ್ಜಸ್ಟ್‌ ಮಾಡಿಕೊಂಡು ಬಂದು ವೋಟ್‌ ಮಾಡಿ. ಇಲ್ಲವಾದರೆ ಐದು ವರ್ಷಗಳು ನಾವು ಅಡ್ಜಸ್ಟ್‌ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!