ಅಧಿಕಾರಕ್ಕಾಗಿ ಅಲ್ಲ ಅಗೌರವದಿಂದ ನಡೆಸಿಕೊಂಡಿದ್ದಕ್ಕೆ ಪಕ್ಷ ತೊರೆದೆ: ಶೆಟ್ಟರ್

ಹೊಸದಿಗಂತ ವರದಿ ಹುಬ್ಬಳ್ಳಿ:

ಅಧಿಕಾರಕ್ಕಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ನಗರಕ್ಕೆ ಆಗಮಿಸಿದ ಅವರು ವಿಮಾನನಿಲ್ದಾಣ ಮಾಧ್ಯಮದವರೊಂದಿಗೆ ಮಾತನಾಡಿದರು. ನಾನು ಅಧಿಕಾರಕ್ಕೆ ಆಸೆ ಪಟ್ಟು ಈ ಪಕ್ಷಕ್ಕೆ ಬಂದಿದ್ದೇನೆ ಎನ್ನುವುದಾರೇ ಹಿಂದೆ ಬಸವರಾಜ ಬೊಮ್ಮಾಯಿ‌ ಅವರ ಸಂಪುಟ ದಲ್ಲಿ ಮಂತ್ರಿ ಆಗುತ್ತಿದ್ದೇನೆ ಎಂದರು.

ಆರು ಬಾರಿ ಸತತವಾಗಿ ಆಯ್ಕೆಯಾದ ವ್ಯಕ್ತಿಯಾಗಿದ್ದು, ಏಳನೇ ಬಾರಿ ಅವಕಾಶ ನೀಡಬೇಕು ಎಂದು ಬಿಜೆಪಿ ಹೈಕಮಾಂಡ ಕೇಳಿದ್ದೆ ಅವರು ಯಾವುದೇ ರೀತಿ ಬೆಲೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ಒಂಬತ್ತು ಬಾರಿ ಆಯ್ಕೆ ಮಾಡಿದವರು ಹಾಗೂ 80 ವರ್ಷ ರಾಜಕಾರಣ ಮಾಡಿದವರು ಇದ್ದಾರೆ. ಕಾಂಗ್ರೆಸ್ ಪಕ್ಷ ಸೇರಿದ ತಕ್ಷಣ ಬಿಜೆಪಿ ಟೀಕೆ ಮಾಡಬೇಕು ಎಂದಿಲ್ಲ. ಪಕ್ಷವೂ ಎಲ್ಲ ಸ್ಥಾನ ಮಾನ ನೀಡಿದೆ. ಪಕ್ಷದ ಬಗ್ಗೆ ಬೇಸರವಿಲ್ಲ. ಕೆಲ ವ್ಯಕ್ತಿಗಳು ಪಕ್ಷದ ಹಿಡಿತಕ್ಕೆ ತೆಗೆದುಕೊಂಡು ಆಟವಾಡುತ್ತಿದ್ದಾರೆ ಅವರಿಗೆ ಟೀಕೆ ಮಾಡುತ್ತೇನೆ ಎಂದರು. ನಾಮಪತ್ರ ಏ. 19 ರಂದು ಸಲ್ಲಿಕೆ ಮಾಡುತ್ತೇನೆ. ಗೌರವದಿಂದ ನಡೆಸಿಕೊಳ್ಳದ ಕಾರಣ ಪಕ್ಷ ಬಿಟ್ಟಿದ್ದೇನೆ ಎಂದು ಹೊರಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!