ಹೊಸದಿಗಂತ ಡಿಜಿಟಲ್ ಡೆಸ್ಕ್
ಕನ್ನಡ ಬಿಗ್ಬಾಸ್ ಸೀಸನ್ 9 ಕೊನೆಯ ಹಂತವನ್ನು ತಲುಪುತ್ತಿದ್ದು, ಎಲ್ಲರು ಜೊತೆಯಾಗಿ ಹೊಂದಾಣಿಕೆಯಿಂದ ದಿನ ಕಳೆಯುತ್ತಿದ್ದಾರೆ.
ಬಿಗ್ ಬಾಸ್ ಅಂದರೆ ಅಲ್ಲಿ ಸಂಬಂಧಗಳು ಬೆಳೆಯುತ್ತದೆ. ಅದುಹುಡುಗ ಹುಡುಗಿ ನಡುವೆ ಕ್ರಶ್ ಆಗಬಹುದು, ಹಾಗೇ ಅಣ್ಣ ತಂಗಿ ನಡುವಿನ ಸಂಬಂಧ. ಆದ್ರೆ ಈ ಬಾರಿಯ ದೊಡ್ಮನೆ ತಂದೆ ಮಗನ ಬಾಂಧವ್ಯಕ್ಕೂ ಸಾಕ್ಷಿಯಾಗಿದೆ.
ಈಗಾಗಲೇ ಆರ್ಯವರ್ಧನ್ ಹಾಗು ರೊಪೇಶ್ ಶೆಟ್ಟಿ ನಡುವಿನ ಭಾಂದವ್ಯ ಬಿಗ್ ಬಾಸ್ ಓಟಿಟಿ ಯಿಂದಲೂ ಅತ್ಯುತ್ತಮವಾಗಿ ಕಾಣುತ್ತಿದೆ. ಇದೀಗ ಈ ಜೋಡಿ ಸೀಸನ್ ೯ ರಲ್ಲೂ ಮುಂದುವರಿದ್ದು, ಇಬ್ಬರು ಒಬ್ಬರಿಗೆ ಒಬ್ಬರು ಸಾಥ್ ನೀಡುತ್ತಾ ಬರುತ್ತಿದ್ದಾರೆ. ರೂಪೇಶ್ ಆರ್ಯವರ್ಧನ್ ಅವರನ್ನು ಅಪ್ಪಾಜಿ ಎಂದು ಕರೆಯುತ್ತಾರೆ. ಅದೇ ರೀತಿ ಅವರು ಕೂಡ ಮಗನಂತೆ ಪ್ರೀತಿಯಿಂದ ಕಾಳಜಿ ವಹಿಸುತ್ತಾರೆ.
ಅದೇ ರೀತಿ ಅಂತಿಮ ಕ್ಷಣ ಟಾಸ್ಕ್ ಆರ್ಯವರ್ಧನ್ ಬಹಳ ಭಾವುಕರಾಗುವ ಹಾಗೆ ಮಾಡಿದ್ದು. ಬಿಗ್ಬಾಸ್ ಮನೆಯಲ್ಲಿ ಅವರೆಲ್ಲ ಸ್ಪರ್ಧಿಗಳೇ. ಗೆಲ್ಲಬೇಕೆಂಬ ಹಂಬಲ ಎಲ್ಲರಲ್ಲೂ ಇರೋದು ಸಹಜ, ಆದರೆ ಇಲ್ಲಿ ತಂದೆ ಮಗನ ಭಾಂದವ್ಯ ಸ್ಪರ್ಧೆಯ ಚೌಕಟ್ಟನ್ನೂ ಮೀರಿ ಹೋಗಿದೆ. ಬಾವುಟವನ್ನು ತನ್ನ ಬದಲು ಮಗ ರೂಪಿ ಪಡೆಯಬೇಕಿತ್ತು ಎನ್ನುತ್ತಾ ಗುರೂಜಿ ಗದ್ಗದಿತರಾಗಿದ್ದಾರೆ .
ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆಯೂ ಒಂದು ಘಟನೆ ನಡೆದಿದೆ. ಅದೇನೆಂದರೆ ,13ನೇ ವಾರದ ಎರಡನೇ ಟಾಸ್ಕ್ ಆಗಿ ಗೆಲುವಿನ ಧ್ವಜವನ್ನ ಬಿಗ್ ಬಾಸ್ ನೀಡಿದ್ದರು. ಇದರ ಅನುಸಾರ, ಎಲ್ಲಾ ಸ್ಪರ್ಧಿಗಳು ವೃತ್ತದ ಒಳಗಿರುವ ಧ್ವಜವನ್ನು ಪಡೆಯಬೇಕಿತ್ತು. ಏಳು ಸುತ್ತುಗಳಲ್ಲಿ ಈ ಆಟ ನಡೆಯಲಿದ್ದು, ಒಂದೊಂದು ಸುತ್ತಿನಲ್ಲಿ ಒಂದೊಂದು ಬಾವುಟ ಕಡಿತಗೊಳಿಸಲಾಗುತ್ತಿತ್ತು. ಯಾರಿಗೆ ಬಾವುಟ ಸಿಗುವುದಿಲ್ಲವೋ ಅವರು ಔಟ್ ಆದಂತೆ. ಆಟದ ಕೊನೆಯವರೆಗೂ ಯಾರು ಬಾವುಟ ಪಡೆಯುತ್ತಾರೋ, ಅವರು ಗೆದ್ದಂತೆ.
ಅದೇ ರೀತಿ ಟಾಸ್ಕ್ನಲ್ಲಿ ಮಗನ ಕೈಯಿಂದ ಆಟ ಕಿತ್ತುಕೊಂಡು ಬಿಟ್ನಲ್ಲ ಅಂತ ಗುರೂಜಿ ಚಿಕ್ಕ ಮಗುವಿನಂತೆ ಭಾವುಕರಾಗಿದ್ದಾರೆ. ಬಾವುಟವನ್ನು ರೂಪೇಶ್ ಶೆಟ್ಟಿ ತಗೊಳ್ಬೇಕಿತ್ತು ಎಂದು ಗುರೂಜಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಆಗ, ನೀವೇ ತಗೊಂಡಿದ್ದು, ಅದಕ್ಕೆ ನಾನು ಬಿಟ್ಟಿದ್ದು. ನಾನು ನಿಮಗೆ ಕೊಡಲಿಲ್ಲ ಎಂದು ರೂಪೇಶ್ ಶೆಟ್ಟಿ ಸಮಾಧಾನ ಮಾಡಿದರೂ, ಇಲ್ಲ ನೀನೇ ತಗೊಳ್ಬೇಕಿತ್ತು ಎಂದು ಗುರೂಜಿ ಅತ್ತರು. ಈ ವೇಳೆ ಭಾವುಕರಾದರು. ಈ ವೇಳೆ ಮನೆ ಮಂದಿ ಸಮಾಧಾನ ಪಡಿಸಿದ್ದಾರೆ.