ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ನಿಮ್ಮ ವಾಯ್ಸ್ ಪ್ಲೇ ಮಾಡಿ ರಾಜ್ಯದ ಜನರಿಗೆ ಕೇಳಿಸೋಣ ಎಂದು ಡಿಸಿಎಂ ಡಿಕೆಶಿಗೆ ದೇವರಾಜೇಗೌಡ ಅವರು ಸವಾಲು ಹಾಕಿದ್ದಾರೆ.
ಇಂದು (ಮೇ 8) ಬೆಂಗಳೂರಿನಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ದೇವರಾಜೇಗೌಡ ಅವರು, ಅಶ್ಲೀಲ ವಿಡಿಯೋ ಬಿಡುಗಡೆಯಾದ ನಂತರ ಅನೇಕ ರಾಜಕೀಯ ನಾಯಕರು ರಕ್ಷಣೆಯಲ್ಲಿದ್ದಾರೆ. ನಾನು ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ನಾನು ಯಾವ ಬೆದರಿಕೆಗೆ ಹೆದರುವುದಿಲ್ಲ, ಯಾವುದೇ ಕಾರಣಕ್ಕೂ ಪ್ರಕರಣವನ್ನು ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮೂರು ತಿಂಗಳ ಹಿಂದೆ ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ನಡೆದಾಗ ಪತ್ರ ಬರೆದಿದ್ದೆ ಆದರೆ ನನಗೆ ನ್ಯಾಯ ಸಿಕ್ಕಿಲ್ಲ. ಇದೀಗ ತಮ್ಮ ಪಕ್ಷದ ನಾಯಕರನ್ನೆ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಅವರ ಪತ್ರವನ್ನು ಸಿಎಂ ಪುರಸ್ಕರಿಸಿದ್ದಾರೆ. ಅಶ್ಲೀಲ ವೀಡಿಯೊಗಳನ್ನು ಹಂಚುವುದು ಗಂಭೀರ ಅಪರಾಧ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ನನ್ನ ವಿರುದ್ಧದ ದೂರುಗಳನ್ನೂ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.