ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಏನು ಬೇಕಾದರೂ ತಿಂದು ಎಲ್ಲಿಗೆ ಬೇಕಾದರೂ ಹೋಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ನಾನು ಮಾಂಸಾಹಾರಿ, ಮಾಂಸಾಹಾರ ಸೇವಿಸುತ್ತೇನೆ. ನಿಮ್ಮ ಹವ್ಯಾಸ ನಿಮಗೆ ನಮ್ಮ ಹವ್ಯಾಸ ನಮಗೆ. ಅದನ್ನು ಕೇಳೋಕೆ ಅವರು ಯಾರು? ಎಂದು ಪ್ರಶ್ನಿಸಿದ್ದಾರೆ.
ನಾನು ಊಟ ಮಾಡಿದ್ದು ಸುದರ್ಶನ ಅತಿಥಿ ಗೃಹದಲ್ಲಿ. ಸಂಜೆ ದೇವಾಲಯಕ್ಕೆ ಹೋಗಿದ್ದೆ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಅವರದು ಬೆಂಕಿ ಹಾಕುವ ಕೆಲಸ ಎಂದು ಟೀಕಿಸಿದರು.