ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾವಿತ್ರಿ ಭಾಯಿ ಫುಲೆ ಜೀವನಾಧಾರಿತ ಸಿನಿಮಾವನ್ನು ಟೀಕಿಸುವ ಭರದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿವಾದಿತ ಹೇಳಿಕೆ ನೀಡಿದ್ದು, ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ? ಎಂದುಪ್ರಶ್ನಿಸಿದ್ದಾರೆ. ಈ ಪ್ರತಿಕ್ರಿಯೆ ಬೆಂಕಿಯ ಜ್ವಾಲೆಯಾಗಿ ಎಲ್ಲೆಡೆ ಪಸರಿಸಿದೆ. ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದೆ.
ಹಲವು ಬಾರಿ ತಮ್ಮ ವಿವಾದಾತ್ಮಕ ಮಾತುಗಳಿಂದಲೇ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಅನುರಾಗ್ ಕಶ್ಯಪ್ ಇದೀಗ ಬ್ರಾಹ್ಮಣ ಸಮುದಾಯ ಎದುರು ಹಾಕಿಕೊಂಡಿದೆ.
ಸಾವಿತ್ರಿ ಭಾಯಿ ಫುಲೆ ಜೀವಾಧಾರಿತ ಸಿನಿಮಾವನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮಸ್ ಸರ್ಟಿಫಿಕೇಶನ್ಗೆ(CBFC) ಕಳುಹಿಸಲಾಗಿತ್ತು. CBFC ಬೋರ್ಡ್ ಈ ಫುಲೆ ಸಿನಿಮಾಗೆ ಯು ಸರ್ಟಿಫಿಕೇಟ್ ನೀಡಿದೆ. ಆದರೆ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ. ಪ್ರಮುಖವಾಗಿ ಈ ಸಿನಿಮಾದಲ್ಲಿ ಬರುವ ಜಾತಿ ಆಧಾರಿತ ಹೆಸರುಗಳು, 3000 ವರ್ಷಗಳ ಗುಲಾಮಿ ಸೇರಿದಂತೆ ಕೆಲ ಡೈಲಾಗ್ಗಳಿಗೂ ಕತ್ತರಿ ಹಾಕಲು ಸೂಚಸಿತ್ತು. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಈ ಸಿನಿಮಾಗೆ ಬ್ರಾಹ್ಣನ ಸಮುದಾಯ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಈ ಕಾರಣದಿಂದ ಎಪ್ರಿಲ್ 11ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಏಪ್ರಿಲ್ 25ಕ್ಕೆ ಮುಂದೂಡಲಾಗಿದೆ.
ಇತ್ತ ಫುಲೆ ಸಿನಿಮಾ ವಿಳಂಬ, CBFC ಬೋರ್ಡ್ ನಿರ್ದೇಶನ, ಜಾತಿವಾದ ಕುರಿತು ಅನುರಾಗ್ ಕಶ್ಯಪ್ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದು, ನನ್ನ ಮೊದಲ ನಾಟಕ ಜ್ಯೋತಿಭಾ ಹಾಗೂ ಸಾವಿತ್ರಿ ಭಾಯಿ ಫುಲೆ ಆಗಿತ್ತು. ದೇಶದಲ್ಲಿ ಜಾತಿವಾದ ಇಲ್ಲದೆ ಇದ್ದಿದ್ದರೆ, ಇವರು ಯಾಕೆ ಹೋರಾಡುತ್ತಿದ್ದರು. ಈಗ ಈ ಬ್ರಾಹ್ಮಣರಿಗೆ ನಾಚಿಕೆಯಾಗುತ್ತಿದೆಯೇ ಅಥವಾ ನಾಚಿಕೆಯಿಂದ ಸಾಯುತ್ತಿದ್ದಾರೋ ಅಥವಾ ನಾವು ನೋಡಲಾಗದ ಬೇರೆ ಬ್ರಾಹ್ಮಣ ಭಾರತದಲ್ಲಿ ವಾಸಿಸುತ್ತಿದ್ದಾರೋ, ಯಾರಾದರೂ ದಯವಿಟ್ಟು ವಿವರಿಸಿ – ನಿಜವಾದ ಮೂರ್ಖ ಯಾರು? ಎಂದು ಪೋಸ್ಟ್ ಮಾಡಿದ್ದರು. ಇದು ವಿವಾದದ ಕಿಡಿ ಮತ್ತಷ್ಟು ಹೆಚ್ಚಿಸಿತ್ತು.
ಅನುರಾಗ್ ಕಶ್ಯಪ್ ಈ ಪೋಸ್ಟ್ ಬ್ರಾಹ್ಮಣ ಸಮುದಾಯವನ್ನು ಮತ್ತಷ್ಟು ಕೆರಳಿಸಿದೆ. ಹೀಗಾಗಿ ಹಲವರು ತಿರುಗೇಟು ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಅನುರಾಗ್ ಕಶ್ಯಪ್ ಬಂದಿರುವ ಕಮೆಂಟ್ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಪ್ರತಿಕ್ರಿಯೆ ನೀಡುವಾಗ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಾದರು ಸಮಸ್ಯೆ ಇದೆಯಾ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ. ಬ್ರಾಹ್ಮಣ ಸಮುದಾಯ ಪ್ರತಿಭಟನೆ ಆರಂಭಿಸಿದೆ.ಅನುರಾಗ್ ಕಶ್ಯಪ್ ವಿರುದ್ದ ಪ್ರತಿಭಟನೆ ಆರಂಭಗೊಂಡಿದೆ.