ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಮೇಲೆ ಕಾರ್ಯಕ್ರಮವೊಂದರಲ್ಲಿ ದುಷ್ಕರ್ಮಿಗಳು ಚಪ್ಪಲಿ ಎಸೆದು ಅವಮಾನಿಸಿದ್ದಾರೆ. ಪುನೀತ್ ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ಜಗಳ ತಾರಕಕ್ಕೇರಿದ್ದು, ನಟನ ಮೇಲೆ ಚಪ್ಪಲಿ ಎಸೆದಿದ್ದನ್ನು ಖಂಡಿಸಿ ಸುದೀಪ ದನಿಯೆತ್ತಿದ್ದಾರೆ.
ದ್ವೇಷ ಎಲ್ಲಾದಕ್ಕೂ ಉತ್ತರವಲ್ಲ, ಸಮಸ್ಯೆಗಳನ್ನು ಬಗೆಹರಿಸೋಕೆ ಅದರದ್ದೇ ಆದ ರೀತಿನೀತಿ ಇದೆ. ಎಲ್ಲರಿಗೂ ಗೌರವ ಪಡೆಯುವ ಹಕ್ಕಿದೆ. ಈ ರೀತಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದನ್ನು ಯಾರೂ ಒಪ್ಪುವುದಿಲ್ಲ. ನಾನು ವಿಚಲಿತನಾಗಿದ್ದೇನೆ. ನಟರ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು ಆದರೆ ಇದು ಯಾವುದಕ್ಕೂ ಉತ್ತರ ಅಲ್ಲ. ಪುನೀತ್ ಹಾಗೂ ದರ್ಶನ್ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ.
ಪುನೀತ್ ಇದ್ದಿದ್ದರೆ ಈ ವಿಷಯಕ್ಕೆ ಬೇಸರಿಸಿಕೊಳ್ಳುತ್ತಿದ್ದರು. ಅವರು ಎಲ್ಲರನ್ನೂ ಗೌರವಿಸುವ ವ್ಯಕ್ತಿ. ಅವರು ಈ ವರ್ತನೆ ಒಪ್ಪುತ್ತಿರಲಿಲ್ಲ. ಈ ನಡೆ ಕನ್ನಡಿಗರದ್ದೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಪ್ರೀತಿ ಹಂಚೋಣ ಎಂದು ಸುದೀರ್ಘವಾದ ಟ್ವೀಟ್ ಒಂದನ್ನು ಮಾಡಿ ಮನಸ್ಸಿನ ಭಾವನೆ ಹೊರಹಾಕಿದ್ದಾರೆ.
❤️🙏🏼 pic.twitter.com/PbR5RzCLTn
— Kichcha Sudeepa (@KicchaSudeep) December 20, 2022