ನೀವು ನನಗೆ ವಿಷ ಕೊಟ್ಟರೆ?: UP ಪೊಲೀಸರು ನೀಡಿದ ಚಹಾ ಕುರಿತು ಅಖಿಲೇಶ್ ಯಾದವ್ ಗೆ ಅನುಮಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚಹಾವನ್ನು ನಿರಾಕರಿಸಿದ್ದಾರೆ. ನೀವಿದರಲ್ಲಿ ವಿಷ ಬೆರೆಸಿರಬಹುದು ಎನ್ನುತ್ತಾ ಯಾದವ್ ಸಂದೇಹ ವ್ಯಕ್ತಪಡಿಸಿದ್ದಾರೆ .

ಇದೀಗ ಈ ರೀತಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಖಿಲೇಶ್ ಯಾದವ್, ಪೊಲೀಸ್ ಸಿಬ್ಬಂದಿ ನೀಡಿದ ಚಹಾವನ್ನು ನಿರಾಕರಿಸಿರುವುದು ಕಂಡುಬಂದಿದೆ. ನಾನು ಇಲ್ಲಿ ಚಹಾ ಕುಡಿಯುವುದಿಲ್ಲ. ನಾವು ಹೊರಗಿನಿಂದ ಚಹಾ ತರಿಸಿಕೊಂಡು ಕುಡಿಯುತ್ತೇವೆ. ಬೇಕೆಂದರೆ ನಾವು ನಿಮ್ಮ ಬಳಿಯಿಂದ ಕಪ್ ತೆಗೆದುಕೊಳ್ಳುತ್ತೇವೆ. ನೀವು ನನಗೆ ವಿಷ ಕೊಟ್ಟರೆ ಏನು? ನನಗೆ ನಿಮ್ಮ ಬಗ್ಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.

ಪಕ್ಷದ ಸಾಮಾಜಿಕ ಮಾಧ್ಯಮ ನಿರ್ವಾಹಕ ಮನೀಶ್ ಜಗನ್ ಅವರು ಟ್ವಿಟರ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಹಜರತ್‌ಗಂಜ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ಭಾನುವಾರ ಬೆಳಗ್ಗೆ ಅಗರ್ವಾಲ್ ಅವರನ್ನು ಬಂಧಿಸಲಾಗಿದೆ.

ಅಗರ್ವಾಲ್ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸಲು ಅಖಿಲೇಶ್ ಯಾದವ್ ಡಿಜಿಪಿ ಕಚೇರಿಗೆ ತೆರಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!