ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕ ಕಟ್ಟಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿದ್ದು, ಗೃಹ ಸಚಿವರನ್ನು ಮಹಿಳೆಯ ಆರೋಗ್ಯವನ್ನು ವಿಚಾರಿಸಿದ್ದಾರೆ.
ಮಗ ಹುಡುಗಿಯ ಜೊತೆಗೆ ಮನೆ ಬಿಟ್ಟು ಹೋಗಿದ್ದಾನೆ ಎನ್ನುವ ಕಾರಣಕ್ಕೆ ಯುವಕನ ತಾಯಿಯನ್ನು ಈ ರೀತಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಹಲ್ಲೆ ಮಾಡಿದ್ದವರಲ್ಲಿ 8-10 ಜನ ಇದ್ದಾರೆ. ಏಳು ಜನರನ್ನು ಬಂಧಿಸಲಾಗಿದೆ. ಇನ್ನಿಬ್ಬರನ್ನು ಬಂಧಿಸಬೇಕಿದೆ ಎಂದಿದ್ದಾರೆ.
ಈ ಜೊತೆಗೆ ಓಡಿಹೋಗಿರುವ ಹುಡುಗ ಹುಡುಗಿಯನ್ನೂ ಹುಡುಕಲಾಗುತ್ತಿದೆ. ಹುಡುಗಿ ಮನೆಯವರು ಪೊಲೀಸರ ಬಳಿ ಬರಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿದ್ದು ಅಮಾನವೀಯ, ಪೊಲೀಸರನ್ನೂ ಮಧ್ಯೆ ಸೇರಿಸಲು ಇಷ್ಟವಿಲ್ಲವಾದರೆ ಊರ ಹಿರಿಯರು ತೀರ್ಮಾನ ಮಾಡಬಹುದಿತ್ತು. ಈ ರೀತಿ ವರ್ತಿಸಿರುವುದಕ್ಕೆ ಕಾನೂನಿನ ಪ್ರಕಾರ ಶಿಕ್ಷೆ ಇದೆ ಎಂದು ಹೇಳಿದ್ದಾರೆ.