ಗೂಂಡಾಗಳನ್ನು ಕಳಿಸಿ ಅಟ್ಯಾಕ್ ಮಾಡಿಸಿದ್ದು ಪಿಣರಾಯಿ ವಿಜಯನ್: ಕೇರಳ ರಾಜ್ಯಪಾಲರಿಂದ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ರಾಜ್ಯಪಾಲರ ಮೇಲೆ ಗೂಂಡಾಗಳು ದಾಳಿ ನಡೆಸಲು ಯತ್ನಿಸಿದ್ದಾರೆ. ಈ ಪಿತೂರಿಗೆ ಸಿಎಂ ಪಿಣರಾಯಿ ವಿಜಯನ್ ಕಾರಣ ಎಂದು ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಆರೋಪಿಸಿದ್ದಾರೆ.

ರಾಜ್ಯಪಾಲರು ದೆಹಲಿಗೆ ತೆರಳಲು ತಿರುವನಂತಪುರಂ ಏರ್‌ಪೋರ್ಟ್‌ಗೆ ಹೋಗುತ್ತಿದ್ದರು. ಈ ವೇಳೆ ಗೂಂಡಾಗಳು ದಾಳಿ ನಡೆಸಲು ಯತ್ನಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ರಾಜ್ಯಪಾಲರು ಮಾತನಾಡಿದ್ದು, ನನ್ನ ಮೇಲೆ ದಾಳಿ ನಡೆಸಲು ಯತ್ನಿಸಿರುವುದು ವಿಜಯ್ ಎಂದು ಚೆನ್ನಾಗಿ ತಿಳಿದಿದೆ. ಇದು ಆಕಸ್ಮಿಕ ಘಟನೆ ಅಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಕಾರ್ಯಕ್ರಮ ನಡೆಯುತ್ತಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ, ಪೊಲೀಸರು ಗೂಂಡಾಗಳನ್ನು ಕಂಡಕೂಡಲೇ ಎಚ್ಚೆತ್ತುಕೊಳ್ಳುತ್ತಿದ್ದರು. ಇಲ್ಲಿ ಪ್ರತಿಭಟನಾಕಾರರ ಕಾರ್‌ಗಳು ನಿಂತಿದ್ದವು. ಪೊಲೀಸರು ಅವರನ್ನು ತಳ್ಳಿದರು. ಇದೆಲ್ಲವೂ ಸಿಎಂ ಕೆಲಸ ಎಂದು ಸ್ಪಷ್ಟವಾಗಿ ಗೊತ್ತಿದೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!