ಕಾಸರಗೋಡಿನಲ್ಲಿ ಗಾಳಿ ಮಳೆಗೆ ಬಾಲಕನ ಮೈಮೇಲೆ ಉರುಳಿದ ತೆಂಗಿನ ಮರ

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಕಾರ್ಯದರ್ಶಿ, ಪೈವಳಿಕೆ ಚೇವಾರು ಸಮೀಪದ ಕೊಂದಲಕಾಡು ನಿವಾಸಿ ಸ್ಟೀಫನ್ ಕ್ರಾಸ್ತಾ ಅವರ ಪುತ್ರ ಶಾನ್ ಆರೋನ್ ಕ್ರಾಸ್ತಾ (13) ಶನಿವಾರ ಬೀಸಿದ ಪ್ರಬಲ ಗಾಳಿ ಹಾಗೂ ಬಿರುಸಿನ ಮಳೆಗೆ ತೆಂಗಿನ ಮರ ಬಿದ್ದು ಮೃತಪಟ್ಟಿದ್ದಾರೆ. ತಂದೆಯ ಜೊತೆ ತೋಟಕ್ಕೆ ಹೋಗಿದ್ದ ವೇಳೆ ತೆಂಗಿನಮರ ಮುರಿದು ಮೈಮೇಲೆ ಬಿತ್ತೆನ್ನಲಾಗಿದೆ.

ತಕ್ಷಣ ವಿದ್ಯಾರ್ಥಿಯನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಬಾಲಕ ಕಯ್ಯಾರು ಡೋನ್ ಬೋಸ್ಕೋ ಎಯುಪಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ. ಮೃತ ವಿದ್ಯಾರ್ಥಿಯು ತಂದೆ, ತಾಯಿ ಅನಿತಾ, ಸಹೋದರಿ ಸೋನಾಲ್ ಅವರನ್ನು ಅಗಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!