ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಸಮ್ಮೇಳನ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಂಘಟನೆಗಾಗಿ ನಮ್ಮ ಸೇವೆಯನ್ನು ನೀಡಿದಾಗ ಸಂಘಟನಾಶಕ್ತಿ ಬಲಗೊಳ್ಳುತ್ತದೆ. ತನ್ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತಂದು ಇಡೀ ದೇಶದ ಒಟ್ಟು ಅಗತ್ಯತೆಗೆ ಪೂರಕವಾಗಿ ಕೆಲಸಮಾಡುವಂತಹ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸುವುದರೊಂದಿಗೆ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ಸಹಕಾರಿ ಸಂಸ್ಥೆಗಳ ನಿರ್ದೇಶಕರ, ಸಹಕಾರಿ ನೌಕರರ ಮತ್ತು ಸಂಘಟನೆಯ ಕಾರ್ಯಕರ್ತರ ಸಮ್ಮೇಳನವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಭಾನುವಾರ ಬೆಳಗ್ಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಸೇವಾಮನೋಭಾವದಿಂದ ದುಡಿದು ನಾಡಿನ ಜನತೆಗೆ ನೆರವಾಗುವುದರೊಂದಿಗೆ ದೇಶಕಟ್ಟುವಲ್ಲಿ ಕೈಜೋಡಿಸಬೇಕು. ಸಂಘಟನೆಗೆ ನಾವು ತನು ಮನ ಧನಗಳಿಂದ ಸಹಕಾರವನ್ನು ನೀಡಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಸಂಘಟನೆಗೂ ನಮಗೂ ಗೌರವ ಲಭಿಸುತ್ತದೆ. ಸಹಕಾರಿ ರಂಗದಲ್ಲಿ ಸಹಕಾರ ಭಾರತಿಯಿಂದ ನೇಮಿತರಾದ ನಿರ್ದೇಶಕರು ಪ್ರಾಮಾಣಿಕವಾದ ಸೇವೆಸಲ್ಲಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಿಸ್ವಾರ್ಥಸೇವೆ, ಪ್ರಾಮಾಣಿಕತೆ ಮತ್ತು ಜನರೊಂದಿಗಿನ ಸಹಕಾರದಿಂದ ಪ್ರೀತಿಯ ಭಾವನೆಯನ್ನು ಬೆಳೆಸಿಕೊಳ್ಳಲು ಇಂತಹ ಅಭ್ಯಾಸವರ್ಗಗಳು ಸಹಕಾರಿಯಾಗುತ್ತದೆ. ಸಂಘದ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸುವ ಕಾರ್ಯಕರ್ತರಿರಬೇಕು. ದೇಶಕ್ಕಾಗಿ ಸಮಾಜಕ್ಕಾಗಿ ನಾನು ಏನು ಮಾಡಿದ್ದೇನೆ?, ಮಾಡುತ್ತೇನೆ ಎಂಬುದಾಗಿ ಆತ್ಮವಿಮರ್ಷೆಮಾಡಿಕೊಳುವುದರೊಂದಿಗೆ ಸಹಕಾರ ಭಾರತಿಯ ಚಿಂತನೆಗೊಳಪಟ್ಟ ಕೆಲಸದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದರು.

ಕೇರಳ ಸರಕಾರದ ನಿವೃತ್ತ ಕಾರ್ಯದರ್ಶಿ ಐಎಎಸ್ ಕೆ.ಗೋಪಾಲಕೃಷ್ಣ ಭಟ್ ಎಡನೀರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಹಿಂದಿನ ಕಷ್ಟಕಾಲದಲ್ಲಿ ಪರಸ್ಪರ ಸಹಕಾರವನ್ನು ನೀಡುತ್ತಾ ಹುಟ್ಟಿಕೊಂಡ ಸಂಸ್ಥೆಯು ಇಂದು ದೇಶದಾದ್ಯಂತ ಹರಸಿಕೊಂಡಿದೆ. ಸಂಘಟನೆಯ ಮೂಲಕ ಸಮಾಜದ ಮೇಲಿರುವ ನಮ್ಮ ಕರ್ತವ್ಯವನ್ನು ಸಾಕಾರಗೊಳಿಸಬೇಕು. ಅಭ್ಯಾಸವರ್ಗಗಳಲ್ಲಿ ಪಾಲ್ಗೊಳ್ಳುವುದರಿಂದ ಬದಲಾವಣೆಗಳನ್ನು ಮನನಮಾಡಿಕೊಳ್ಳಲು ಸಾಧ್ಯವಿದೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ನಮ್ಮ ಉದ್ದೇಶವನ್ನು ಈಡೇರಿಕೊಳ್ಳಬೇಕು ಎನ್ನುತ್ತಾ ಸಹಕಾರಿ ತತ್ವಗಳ ಕುರಿತು ವಿವರಿಸಿದರು.

ಸಮಾಜದ ಪ್ರತಿಯೊಂದು ಸ್ಥರದಲ್ಲಿಯೂ ಸಹಕಾರೀ ಸಂಸ್ಥೆಗಳನ್ನು ನಾವು ಕಾಣಬಹುದಾಗಿದೆ. ಉದ್ದೇಶ, ಧ್ಯೇಯ, ಸಾಧನೆಯ ಹಿಂದೆ ರಾಜಕೀಯವನ್ನು ಮರೆತು ಒಗ್ಗಟ್ಟಿನಿಂದ ಮುಂದುವರಿದರೆ ಮಾತ್ರ ನಮ್ಮ ಆಶಯಗಳನ್ನು ಈಡೇರಿಸಬಹುದಾಗಿದೆ ಎಂದರು.

ಸಹಕಾರ ಭಾರತಿ ಕೇರಳ ರಾಜ್ಯ ಅಧ್ಯಕ್ಷ ಪಿ. ಸುಧಾಕರನ್ ಮುಖ್ಯ ಭಾಷಣಕಾರರಾಗಿ ಮಾತನಾಡಿ ಕಾಸರಗೋಡು ಜಿಲ್ಲೆಯಲ್ಲಿ ಸಹಕಾರ ಭಾರತಿಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಇನ್ನೂ ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.

ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಸಮಿತಿ ಸದಸ್ಯ ವಕೀಲ ಕೆ. ಕರುಣಾಕರನ್ ನಂಬ್ಯಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಆರ್.ಕಣ್ಣನ್, ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೋಹನಚಂದ್ರನ್, ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ, ಎಂಪ್ಲೋಯೀಸ್ ಸೆಲ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣನ್ ಕೆ., ಸಂಘಟಕ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಭಟ್ ಕಿದೂರು ಪಾಲ್ಗೊಂಡು ಮಾತನಾಡಿದರು. ಸಂಚಾಲಕ ಪದ್ಮರಾಜ ಪಟ್ಟಾಜೆ ಸ್ವಾಗತಿಸಿ, ಜೊತೆಗೆ ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲನ್ ಕೆ.ಎನ್. ವಂದಿಸಿದರು. ಸಂಘಟಕ ಸಮಿತಿ ಸಹಸಂಚಾಲಕ ಅಶೋಕ ಬಾಡೂರು ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!