ಹೊಸದಿಗಂತ ಡಿಜಿಟಲ್ ಡೆಸ್ಕ್
ಸಿಎನ್ಜಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದ್ದು,ಈ ಹಿನ್ನೆಲೆ ಆಕ್ರೋಶಗೊಂಡ ಆಟೋ, ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು, ಇಂಧನಕ್ಕೆ ಸಬ್ಸಿಡಿ ನೀಡದಿದ್ದರೆ ಅಥವಾ ಪ್ರಯಾಣ ದರವನ್ನು ಹೆಚ್ಚಿಸದಿದ್ದರೆ ಏಪ್ರಿಲ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆಟೋ, ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರ ಸಂಘಗಳು ಶುಕ್ರವಾರ ದೆಹಲಿಯ ಜಂತರ್ ಮಂತರ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಏಪ್ರಿಲ್ 11 ರಂದು ದೆಹಲಿ ಸೆಕ್ರೆಟರಿಯೇಟ್ನಲ್ಲಿ ಸಿಎನ್ಜಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಿವೆ.
ಸಿಎನ್ಜಿ ಬೆಲೆ ಕಡಿಮೆ ಮಾಡಬೇಕು ಅಥವಾ ಪ್ರಯಾಣ ದರ ಹೆಚ್ಚಿಸಿ, ಇಲ್ಲದಿದ್ದರೆ ತಮ್ಮ ಸಂಘ ‘ಅನಿರ್ದಿಷ್ಟಾವಧಿ ಮುಷ್ಕರ’ ನಡೆಸಲಿದೆ ಎಂದು ಸರ್ವೋದಯ ಡ್ರೈವರ್ಸ್ ವೆಲ್ಫೇರ್ ಅಸೋಸಿಯೇಷನ್ ನ ರವಿ ರಾಥೋರ್ ಅವರು ಹೇಳಿದ್ದಾರೆ.