INDIA ಮೈತ್ರಿಕೂಟ ಪ್ರಧಾನಿ ಮೋದಿ ನಿದ್ದೆಗೆಡಿಸಿದೆ: ಕಾಂಗ್ರೆಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

INDIA ಮೈತ್ರಿಕೂಟ ಪ್ರಧಾನಿ ಮೋದಿ ಅವರ ನಿದ್ದೆಗೆಡಿಸಿದೆ ಎಂದು ಕಾಂಗ್ರೆಸ್ ಸಂಸದ ಅಧೀಕರ್ ರಂಜನ್ ಚೌಧರಿ ಹೇಳಿದ್ದಾರೆ.

ಲೋಕಸಭೆಯಿಂದ ಅಮಾನತು ಆದೇಶವನ್ನು ಹಿಂಪಡೆದ ಬಳಿಕ ಮಾತನಾಡಿದ ಅವರು, INDIA ಮೈತ್ರಿ ಮೋದಿಗೆ ದೊಡ್ಡ ಅಪಾಯಕಾರಿಯಾಗಲಿದೆ. ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರು ಪ್ರಧಾನಿಗೆ ನಿದ್ರೆ ಮಾತ್ರೆ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.

ಇದೇ ವೇಳೆ ತನ್ನ ಅಮಾನತಿನ ಕುರಿತು ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ಬಹುಶ: ನಾನು ಹೇಳಿರುವುದನ್ನು ತಪ್ಪಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಒಂದು ವೇಳೆ ನಾನು ಏನಾದರೂ ಅಸಂಸದೀಯ ಮಾತುಗಳನ್ನಾಡಿರುವುದು ಸಾಬೀತಾದರೆ ಸಾರ್ವಜನಿಕ ಜೀವನವನ್ನು ತ್ಯಜಿಸುವುದಾಗಿ ತಿಳಿಸಿದರು.

ನಿಯಮಗಳ ಪ್ರಕಾರ ಸದನದಲ್ಲಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ. ಸದನದಲ್ಲಿ ನನಗೆ ವಿವರಣೆ ಕೇಳಿದರೆ ನಾನು ಅದನ್ನು ನೀಡುತ್ತಿದ್ದೆ. ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿರುವುದಕ್ಕೆ ಸದನದಲ್ಲಿ ದಾಖಲೆ ಇದೆ, ಈ ಬಗ್ಗೆ ಯಾರು ಯೋಚಿಸುತ್ತಾರೆ?, ಒಂದು ವೇಳೆ ನಾನು ತಪ್ಪಾಗಿ ಹೇಳಿಕೆ ನೀಡಿರುವುದು ಸಾಬೀತಾದರೆ ರಾಜಕೀಯ ರಂಗದಿಂದ ದೂರು ಉಳಿಯುವುದಾಗಿ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!