ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ನಲ್ಲಿ ರಷ್ಯಾ ಸೇನೆ ದಾಳಿ ತೀವ್ರಗೊಳಿಸಿದ್ದು, ಉಕ್ರೇನ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಹೆಚ್ಚಿನ ಪ್ರಯತ್ನ ಮಾಡುತ್ತಿದೆ.
ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳನ್ನು ಭಾರತ ಸರ್ಕಾರ ವೇಗಗೊಳಿಸಿದ್ದು, ಭಾರತೀಯರು ಸುರಕ್ಷಿತವಾಗಿ ಮನೆಗೆ ಮರಳುವ ಭರವಸೆಯನ್ನು ಸರ್ಕಾರ ನೀಡಿದೆ.
ಯುದ್ಧಗ್ರಸ್ತ ಭೂಮಿಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರೂ, ಹಂಗೇರಿ, ರುಮೇನಿಯಾ ಮತ್ತು ಪೋಲೆಂಡ್ಗೆ ಭಾರತೀಯರ ತೆರವಿಗೆ ಅನುಕೂಲವಾಗುವಂತೆ ಪಶ್ಚಿಮ ಉಕ್ರೇನ್ನ ಎಲ್ವಿನ್ ಮತ್ತು ಚೆರ್ನಿವ್ಟ್ಸಿ ಪಟ್ಟಣಗಳಲ್ಲಿ ಶಿಬಿರ ಕಚೇರಿಗಳನ್ನು ಭಾರತ ಈಗಾಗಲೇ ಸ್ಥಾಪಿಸಿದೆ.
ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟ ಮೊದಲ ಬ್ಯಾಚ್ ಸುಸೇವಾ ಗಡಿ ದಾಟುವ ಮೂಲಕ ರುಮೇನಿಯಾವನ್ನು ತಲುಪಿದ್ದಾರೆ. ಭಾರತೀಯ ಅಧಿಕಾರಿಗಳು ಭಾರತಕ್ಕೆ ಅವರ ಮುಂದಿನ ಪ್ರಯಾಣಕ್ಕೆ ಬುಕಾರೆಸ್ಟ್ಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.