ಅಪಹೃತ ಬಾಂಗ್ಲಾ ಹಡಗಿಗೆ ಭಾರತೀಯ ನೌಕಾ ಪಡೆಯ ರಕ್ಷಣೆ: ಸುರಕ್ಷಿತವಾಗಿ ತೀರ ತಲುಪಿದ ಹಡಗು ಸಿಬ್ಬಂದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ ಬಾಂಗ್ಲದೇಶದ ಸರಕು ಸಾಗಣೆ ಹಡಗಿಗೆ ಯುದ್ಧ ನೌಕೆ ಹಾಗೂ ಗಸ್ತು ವಿಮಾನಗಳ ಮೂಲಕ ರಕ್ಷಣೆ ನೀಡುವ ಮೂಲಕ ಭಾರತೀಯ ನೌಕಾಪಡೆ ಹಡಗು ಸಹಿತ ಅದರಲ್ಲಿದ್ದ ಎಲ್ಲಾ ಸಿಬ್ಬಂದಿಗಳನ್ನಿ ಸುರಕ್ಷಿತವಾಗಿ ದಡ ಸೇರಿಸಿ ವಿಶ್ವದ ಗಮನಸೆಳೆದೆ.
ಬಾಂಗ್ಲಾದೇಶಕ್ಕೆ ಸೇರಿದ ಈ ಹಡಗನ್ನು ಕಡಲ್ಗಳ್ಳರು ಮಾ.12ರಂದು ಅಪಹರಿಸಿದ್ದರು. ಮಾಹಿತಿ ಸಿಗುತ್ತಿದ್ದಂತೆಯೇ ತನ್ನ ಕಡಲ ಗಡಿ ಗಸ್ತು ಯುದ್ಧನೌಕೆ ಪಿ-8ಐಯನ್ನು ರವಾನಿಸಿದ ಭಾರತೀಯ ನೌಕಾಪಡೆ ಅಪಹೃತ ಹಡಗು ಸೋಮಾಲಿಯಾ ಕಡಲ ಗಡಿ ತಲುಪುವವರೆಗೂ, ಅದರ ಸಮೀಪದಲ್ಲಿಯೇ ಸಾಗಿ ಹಡಗು ಸಿಬ್ಬಂದಿಗಳಿಗೆ ಯಾವುದೇ ಅಪಾಯವಾಗದಂತೆ ನೋಡಿಕೊಂಡಿದೆ. ಈ ಕಾರ್ಯಾಚರಣೆಗೆ ಗಸ್ತು ವಿಮಾನ ಕೂಡಾ ಸಾಥ್ ನೀಡಿತ್ತು.
ಈ ಕಾರ್ಯಾಚರಣೆ ಕುರಿತು ನೌಕಾಪಡೆ ಅಧಿಕೃತ ಮಾಹಿತಿ ನೀಡಿದ್ದು, ಹಡಗಿನಲ್ಲಿರುವ ಬಾಂಗ್ಲಾದೇಶದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಪಹೃತವಾಗುವ ಹಡಗುಗಳ ರಕ್ಷಣೆಗೆ ಭಾರತೀಯ ನೌಕಾಪಡೆಯು ತುರ್ತು ನೆರವಿನ ಹಸ್ತಚಾಚುತ್ತಿದೆ ಎಂಬುದಕ್ಕೆ ಈ ಕಾರ್ಯಾಚರಣೆ ತಾಜಾ ನಿದರ್ಶನವಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!