ಬಾಲಸೋರ್‌ನಲ್ಲಿ ರೈಲ್ವೆ ಹಳಿ ದುರಸ್ತಿ: ವಂದೇಭಾರತ್, ಪ್ಯಾಸೆಂಜರ್ ರೈಲುಗಳ ಓಡಾಟ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾರಣಾಂತಿಕ ರೈಲು ಅಪಘಾತ ಸಂಭವಿಸಿದ ಬಾಲಸೋರ್‌ನಲ್ಲಿ ರೈಲು ಹಳಿಗಳ ಮರುಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ. ಇದರೊಂದಿಗೆ ಸೋಮವಾರ ಬೆಳಗ್ಗೆ ಬಾಲಸೋರ್‌ನಿಂದ ವಂದೇಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಹಲವು ಪ್ಯಾಸೆಂಜರ್ ರೈಲುಗಳು ಸಂಚಾರ ಶುರುವಾಗಿವೆ.

ಅಪಘಾತವಾದ 51 ಗಂಟೆಗಳಲ್ಲಿ ರೈಲ್ವೆ ಹಳಿ ಮರುಸ್ಥಾಪನೆ ಕಾರ್ಯವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಗೂಡ್ಸ್ ರೈಲನ್ನು ನಿರ್ವಹಿಸುತ್ತಿದ್ದ ಅಧಿಕಾರಿಗಳು ಸೋಮವಾರ ಬೆಳಗ್ಗೆ ಪ್ಯಾಸೆಂಜರ್ ರೈಲುಗಳನ್ನು ಓಡಿಸಿದರು.

ದುರಸ್ತಿಗೊಂಡ ರೈಲ್ವೆ ಹಳಿಯಲ್ಲಿ ಕಡಿಮೆ ವೇಗದಲ್ಲಿ ವಂದೇ ಭಾರತ್ ರೈಲನ್ನು ಓಡಿಸಲಾಯಿತು. ಸಿಗ್ನಲಿಂಗ್ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ಎಂದು ಸಚಿವರು ಹೇಳಿದರು. ವಿಶಾಖಪಟ್ಟಣಂನಿಂದ ರೂರ್ಕೆಲಾಗೆ ಕಲ್ಲಿದ್ದಲು ಹೊಂದಿರುವ ಗೂಡ್ಸ್ ರೈಲನ್ನು ಮೊದಲು ದುರಸ್ತಿ ಮಾಡಿದ ರೈಲು ಮಾರ್ಗದಲ್ಲಿ ಬಹಾನಗರ್ ಬಜಾರ್ ರೈಲು ನಿಲ್ದಾಣದಲ್ಲಿ ಓಡಿಸಲಾಯಿತು. ಪುರಿ-ಹೌರಾ ನಡುವೆ ವಿಶೇಷ ರೈಲುಗಳನ್ನು ಓಡಿಸಲಾಯಿತು. ನಂತರ ಭದ್ರಕ್-ಖರಗ್‌ಪುರ ನಡುವಿನ ಕೆಲವು ರೈಲುಗಳನ್ನು ಓಡಿಸಲಾಯಿತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!