ಕಾವೇರಿ ಮಾತೆ- ಕೊಡವ ಜನಾಂಗದ ವಿರುದ್ಧ ಅವಹೇಳನ: ಆರೋಪಿ ವಿರುದ್ಧ ದೂರು ದಾಖಲು

ಹೊಸದಿಗಂತ ವರದಿ, ವೀರಾಜಪೇಟೆ:
ಕೊಡಗಿನ ಕುಲದೇವತೆ ಕಾವೇರಿ ಮಾತೆ ಹಾಗೂ ಕೊಡವ ಜನಾಂಗದ ಕುರಿತು ಅವಹೇಳನಕಾರಿ ಸಂದೇಶದ ಪೋಸ್ಟ್ ಹಾಕಿರುವ ಆರೋಪಿಯ ವಿರುದ್ಧ ವೀರಾಜಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಕುಬೆಯಂಡ ಮನುಕುಮಾರ್ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ ಅವರಿಗೆ ದೂರು ನೀಡಲಾಗಿದೆ.
ಸಮಾಜದ ಕಾರ್ಯದಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಇನ್ಸ್ಟಾಗ್ರಾಮ್‍ನಲ್ಲಿ ಮಹಮ್ಮದ್ ಅಶ್ಫಕ್‌ ಎಂಬ ಹೆಸರಿನ ವ್ಯಕ್ತಿ ಕೊಡವ ಜನಾಂಗಕ್ಕೆ ಅವಮಾನ ಮಾಡಿದ್ದು, ಕೊಡಗಿನ ಕುಲದೇವಿ ಕಾವೇರಿಗೆ ಅವಮಾನ ಮಾಡಲಾಗಿದೆ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದು, ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ದೂರು ಸಲ್ಲಿಸುವ ಸಂದರ್ಭ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕಾಂತಿ ಸತೀಶ್, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಬಿ.ಎಂ.ಕುಮಾರ್, ಕೊಡವ ಸಮಾಜದ ಉಪಾಧ್ಯಕ್ಷ ಕುಯ್ಮಂಡ ಕಿರಣ್, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮತ್ತು ಆಡಳಿತ ಮಂಡಳಿ ಸದಸ್ಯರು, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯರಾದ ಮಾಳೇಟಿರ ಕವಿತಾ ಶ್ರೀನಿವಾಸ್, ಮುಲ್ಲೇಂಗಡ ಶೀಲಾ ಅಪ್ಪಯ್ಯ , ಮೇರಿಯಂಡ ಗಾಯತ್ರಿ ಅಚ್ಚಮ್ಮ ಮತ್ತು ಚೋಕಂಡ ರೇಖಾ ಪ್ರಕಾಶ್, ತಾಲೂಕು ಯುವಸೇನೆಯ ಘಟಕದ ಅಧ್ಯಕ್ಷ ಮಾಚೇಟಿರ ಸಚಿನ್, ಜಮ್ಮ ಕೊಡವ ಗ್ರೂಪ್’ನ ಪ್ರಮುಖರಾದ ತಂಬಾಂಡ ಡ್ಯಾನಿ ನಾಣಯ್ಯ, ಮತ್ತು ಎ. ಅಪ್ಪಯ್ಯ ಮತ್ತಿತರರು ಇದ್ದರು.
ಇದರೊಂದಿಗೆ ವೀರಾಜಪೇಟೆ ತಾಲೂಕು ಯುವ ಸೇನೆ, ಜಮ್ಮ ಕೊಡವ ಗ್ರೂಪ್ ಸಹ ಪ್ರತ್ಯೇಕ ದೂರು ಸಲ್ಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!