IPL | ಕನ್ನಡಿಗನನ್ನು ಕೆಣಕಿದ್ದಕ್ಕೆ ಹರ್ಷಿತ್​ ರಾಣಾಗೆ ಸಿಕ್ತು ಸರಿಯಾದ ಶಿಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನಗಿಂತ 11 ವರ್ಷ ಹಿರಿಯ ಕರ್ನಾಟಕದ ಆಟಗಾರನಿಗೆ ಮೈದಾನದಲ್ಲಿ ಕೆಣಕಿದ್ದಕ್ಕೆ ಪಂದ್ಯದ ಶುಲ್ಕದಲ್ಲಿ ಶೇ.60ರಷ್ಟು ದಂಡ ತೆರಬೇಕಾದ ಪರಿಸ್ಥಿತಿ ಹರ್ಷಿತ್​ ರಾಣಾಗೆ ಬಂದಿದೆ. ಮಯಾಂಕ್​ ಅಗರ್​ವಾಲ್​ ವಿಕೆಟ್​ ಕಿತ್ತುಕೊಂಡೆ ಎಂಬ ಖುಷಿಯಲ್ಲಿ ರೊಚ್ಚಿಗೆದ್ದ ಹರ್ಷಿತ್​ ಭಿನ್ನವಾಗಿ ವರ್ತಿಸಿದ್ದಾರೆ. ಇದೀಗ ಈ ತಪ್ಪಿಗೆ ರಾಣಾಗೆ ದಂಡ ವಿಧಿಸಲಾಗಿದೆ.

ಇನ್ನು ಈ ಪಂದ್ಯದ ವೇಳೆ ಹರ್ಷಿತ್​ ರಾಣಾ ಮೂರು ವಿಕೆಟ್​ ಪಡೆದಿದ್ದಾರೆ. ಮಯಾಂಕ್​ ಅಗರ್ವಾಲ್ ರಾಣಾ ಎಸೆತಕ್ಕೆ​ ಬ್ಯಾಟ್​ ಬಿಸಲು ಹೋಗಿ ಔಟಾದರು. ಈ ಸಂತಸವನ್ನು ಸಂಭ್ರಮಿಸುವ ಭರದಲ್ಲಿ ರಾಣಾ ಭಿನ್ನವಾದ ವರ್ತನೆ ತೋರಿದ್ದಾರೆ. ಇದನ್ನು ಗಮನಿಸಿದ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ರಾಣಾಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅದರಲ್ಲಿ ಕೆಲವರು ನಿನಗಿದು ಬೇಕಿತ್ತಾ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!