IPL | ಕಹಾನಿ ಮೇ ಟ್ವಿಸ್ಟ್: ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಯಾವಾಗಲೂ ಉತ್ಸಾಹದಿಂದ ತುಂಬಿರುತ್ತವೆ. 2008 ರಲ್ಲಿ ಲಕ್ಷದಲ್ಲಿ ಪ್ರಾರಂಭವಾದ ಪಂದ್ಯಾವಳಿಯು ಈಗ ಕೋಟಿ ಮೌಲ್ಯದ್ದಾಗಿದೆ. ದುಡ್ಡಿನ ಹಿಂದೆ ಬಿದ್ದ ಆಟಗಾರರು ಮೊದಲು ಹಣ ಮುಖ್ಯ ಎನ್ನುತ್ತಾರೆ. ಆದರೆ ಕೆಲವರು ಮಾತ್ರ ನಿಷ್ಠೆ ಮುಖ್ಯ ಎನ್ನುತ್ತಾರೆ. ಈ ಸಾಲಿನಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಯರ್ ಸೂರ್ಯ ಕುಮಾರ್ ಯಾದವ್ ಮತ್ತು ಜಸ್​​ಪ್ರಿತ್​ ಬುಮ್ರಾ ಕೂಡ ಇದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ, ಪ್ರತಿ ಪಂದ್ಯಕ್ಕೂ ಮುನ್ನ ವಿವಿಧ ತಂಡಗಳು ಸೂರ್ಯಕುಮಾರ್ ಯಾದವ್ ಮತ್ತು ಜಸ್​​ಪ್ರಿತ್​ ಬುಮ್ರಾ ಅವರನ್ನು ಭೇಟಿ ಮಾಡಿದೆ. ಅವರಿಗೆ 15 ಕೋಟಿಗೂ ಹೆಚ್ಚು ಸಂಭಾವನೆಯನ್ನು ನೀಡಲು ಮುಂದಾಗಿದ್ದವು ಎನ್ನಲಾಗಿದೆ.

ಆದರೆ ಇಬ್ಬರೂ ಮುಂಬೈ ಫ್ರಾಂಚೈಸಿ ತೊರೆಯಲು ಒಪ್ಪಿಲ್ಲ. ಇದಕ್ಕೆಲ್ಲಾ ರೋಹಿತ್ ಶರ್ಮಾ ಕಾರಣ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಇಬ್ಬರಿಗೂ ಜೀವನ ಕೊಟ್ಟಿದ್ದು ಸತ್ಯ. ಅವರ ಪ್ರತಿಭೆಯನ್ನು ರೋಹಿತ್ ಶರ್ಮಾ ಕಂಡುಹಿದು ಪ್ರೋತ್ಸಾಹಿಸಿದರು. ಹಾಗಾಗಿ ರೋಹಿತ್ ಶರ್ಮಾ ಬರುವವರೆಗೂ ಮುಂಬೈ ಇಂಡಿಯನ್ಸ್ ತೊರೆಯುವುದಿಲ್ಲ ಎಂದು ಇಬ್ಬರೂ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!