August 2, 2026
Sunday, August 2, 2026
spot_img

ಮುಂಬೈ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? CSK ಜೊತೆಗಿನ ಟ್ರೇಡಿಂಗ್ ವದಂತಿಗೆ ಬ್ರೇಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಐಪಿಎಲ್ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ವರ್ಗಾವಣೆಯಾಗಲಿದ್ದಾರೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದ್ದವು. ಆದರೆ, ಈ ಕುರಿತು ಸಿಎಸ್‌ಕೆ ಅಥವಾ ಇತರ ಯಾವುದೇ ಫ್ರಾಂಚೈಸಿಗಳೊಂದಿಗೆ ಯಾವುದೇ ಚರ್ಚೆಗಳು ನಡೆದಿಲ್ಲ, ಇವೆಲ್ಲವೂ ಆಧಾರರಹಿತ ಗಾಳಿಸುದ್ದಿಗಳು ಎಂದು ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ವದಂತಿಯಲ್ಲಿದ್ದ ಷರತ್ತುಗಳು ಹಾಗೂ ಕೌಂಟರ್ ಆಫರ್

ಹಾರ್ದಿಕ್‌ರನ್ನು ಬಿಟ್ಟುಕೊಡಲು ಎಂಐ ಫ್ರಾಂಚೈಸಿಯು ಚೆನ್ನೈ ತಂಡದಿಂದ ಆಲ್-ರೌಂಡರ್ ಶಿವಂ ದುಬೆ ಮತ್ತು ಯುವ ಆಟಗಾರ ಆಯುಷ್ ಮ್ಹಾತ್ರೆ ಅವರನ್ನು ಬೇಡಿಕೆಯಿಟ್ಟಿತ್ತು ಎಂದು ವರದಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಸಿಎಸ್‌ಕೆ ಮ್ಹಾತ್ರೆಯನ್ನು ನೀಡಲು ನಿರಾಕರಿಸಿ, ಶಿವಂ ದುಬೆ ಜೊತೆಗೆ ಡೆವಾಲ್ಡ್ ಬ್ರೆವಿಸ್ ಮತ್ತು ₹10 ಕೋಟಿ ನಗದು ಹಣದ ಆಫರ್ ನೀಡಿದೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆಟಗಾರರ ಮೌಲ್ಯದ ಕುರಿತು ಒಮ್ಮತ ಮೂಡದ ಕಾರಣ ಡೀಲ್ ಅರ್ಧಕ್ಕೆ ನಿಂತಿದೆ ಎನ್ನಲಾಗಿತ್ತು.

ಡೆಲ್ಲಿ, ಕೆಕೆಆರ್ ಆಸಕ್ತಿ ಮತ್ತು ಅಧಿಕೃತ ಸ್ಪಷ್ಟನೆ

ಇದಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ (DC) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಸಹ ಹಾರ್ದಿಕ್‌ರನ್ನು ಸೆಳೆಯಲು ಮುಂದಾಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಎಲ್ಲಾ ವದಂತಿಗಳಿಗೆ ಕೊನೆಹಾಡಿರುವ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಮತ್ತು ಮುಂಬೈ ಇಂಡಿಯನ್ಸ್ ವಕ್ತಾರರು ‘ಕ್ರಿಕ್‌ಬಜ್’ಗೆ ನೀಡಿದ ಜಂಟಿ ಸ್ಪಷ್ಟನೆಯಲ್ಲಿ, ಸದ್ಯಕ್ಕೆ ಯಾವುದೇ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !