ವಿರಾಟ್ ನಾಯಕತ್ವ ತ್ಯಜಿಸೋಕೆ ಕೋಚ್ ದ್ರಾವಿಡ್ ಕಾರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೋಹ್ಲಿ ನಾಯಕತ್ವ ತ್ಯಜಿಸೋದಕ್ಕೆ ಕೋಚ್ ರಾಹುಲ್ ದ್ರಾವಿಡ್ ಕೂಡ ಒಂದು ಕಾರಣ. ಅವರೊಂದಿಗೆ ಹೊಂದಾಣಿಕೆ ಸಮಸ್ಯೆ ಆಗಿದ್ದರಿಂದಲೇ ವಿರಾಟ್ ಕ್ಯಾಪ್ಟನ್ಸಿ ತ್ಯಜಿಸಿದ್ದು ಎಂದು ಪಾಕ್‌ನ ಮಾಜಿ ನಾಯಕ ಸಲ್ಮಾನ್ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ಕೋಚ್ ಮತ್ತು ನಾಯಕನ ನಡುವೆ ಹೊಂದಾಣಿಕೆ ಇಲ್ಲದಿರುವುದು ಎದ್ದು ಕಾಣುತ್ತಿದೆ. ಇಬ್ಬರ ವ್ಯಕ್ತಿತ್ವ ಬಹಳ ಭಿನ್ನವಾಗಿದೆ. ಕೋಹ್ಲಿರದ್ದು ಆಕ್ರಮಣಾಕಾರಿ ಮನೋಭಾವ, ಕೋಚ್ ತುಂಬಾನೇ ಕೂಲ್ ಆಗಿದ್ದಾರೆ. ಈ ಹಿಂದೆ ಕೋಚ್ ಆಗಿದ್ದ ರವಿಶಾಸ್ತ್ರಿ ಅವರಿಗೂ ಕೋಹ್ಲಿಗೂ ಚೆನ್ನಾಗಿಯೇ ಹೊಂದಾಣಿಕೆ ಆಗುತ್ತಿತ್ತು. ಈ ಜೋಡಿ ಹಿಟ್ ಆಗಿದ್ದಕ್ಕೆ ಇವರ ಹೊಂದಾಣಿಕೆಯೇ ಮುಖ್ಯ ಕಾರಣ.

ಟೀಂ ಇಂಡಿಯಾವನ್ನು ಕೋಹ್ಲಿ ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ. ಅವರ ಕೊಡುಗೆ ಅಪಾರ. ಕೋಹ್ಲಿ ನಾಯಕತ್ವ ಇಷ್ಟು ಬೇಗ ಬಿಡಬಾರದಿತ್ತು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!