ಕಲ್ಲು ತೂರಾಟಕ್ಕೆ ರಕ್ಷಣಾ ಪಡೆಗಳ ಗುಂಡಿನ ಮಳೆಯ ತಿರುಗೇಟು: ಓರ್ವ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವೆಸ್ಟ್‌ ಬ್ಯಾಂಕ್ ದಂಡೆಯಲ್ಲಿ ನಡೆದ ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆಸಿದ ಪ್ಯಾಲೆಸ್ಟೀನಿಯರ ಗುಂಪಿನ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 16 ವರ್ಷದ ಯುವಕ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.
ರಮಲ್ಲಾ ನಗರದ ಸಮೀಪವಿರುವ ಮುಖ್ಯ ಹೆದ್ದಾರಿಯೊಂದರಲ್ಲಿ ಪ್ಯಾಲೆಸ್ಟೀನಿಯರ ಗುಂಪು ಕಲ್ಲುಗಳನ್ನು ಎಸೆಯಲು ತೊಡಗಿದ್ದರಿಂದ  ಅವರತ್ತ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಕಲ್ಲು ತೂರಾಟ ನಡೆಸುತ್ತಿದ್ದ ಮಹಮದ್‌ ಅಬ್ದುಲ್ಲಾ ಹಮೇದ್‌ ಎಂಬ ಯುವಕ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಆ ಬಳಿಕ ಆತನನ್ನು ಇಸ್ರೇಲಿ ಪಡೆಗಳು ತಮ್ಮ ವಶಕ್ಕೆ ಪಡೆದವು. ಹುಡುಗ ಇಸ್ರೇಲ್‌ ಪಡೆಗಳ ವಶದಲ್ಲಿ ಇದ್ದಾಗಲೇ ಮೃತಪಟ್ಟಿದ್ದಾನೆ ಎಂದು ಪ್ಯಾಲೇಸ್ಟಿನಿಯನ್ ಸುದ್ದಿ ಸಂಸ್ಥೆ ವಾಫಾ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!