ಕೇಂದ್ರವೇ ಅಕ್ಕಿ ಕೊಡೋದು ಎಲ್ಲಕ್ಕಿಂತ ಸೂಕ್ತ: ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ಜನರಿಗೆ ಅಕ್ಕಿ ಕೊಡುವುದಾಗಿ ಮಾತು ನೀಡಿದೆ, ಇದನ್ನು ಈಡೇರಿಸಲೇಬೇಕು, ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಎಲ್ಲ ಪ್ರಯತ್ನ ಮಾಡ್ತಿದ್ದಾರೆ. ಕೇಂದ್ರ ಈಗಲಾದರೂ ಮನಸ್ಸು ಮಾಡಿ ಅಕ್ಕಿ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಹೆಚ್ಚುವರಿ ಅಕ್ಕಿ ಪೂರೈಕೆ ಮಾಡಲು ಕೇಂದ್ರ ಇಲ್ಲ ಎಂದಿದೆ, ನಾವು ಫ್ರೀಯಾಗಿ ಕೊಡಿ ಅಂತ ಕೇಳ್ತಿಲ್ಲ. ಹಣ ಕೊಡುತ್ತೇವೆ ಎಂದಿದ್ದಾರೆ.

ಜನರ ಹಿತದೃಷ್ಟಿಯಿಂದ ಕೇಂದ್ರ ಅಕ್ಕಿ ಕೊಡುವ ನಿರ್ಧಾರವನ್ನು ಮಾಡಲೇಬೇಕಿದೆ. ನೀವೇ ಯೋಚಿಸಿ ಕೇಂದ್ರ ಬೇರೆ ದೇಶಗಳಿಗೆ ಸಹಾಯ ಮಾಡುತ್ತದೆ. ಆದರೆ ನಮ್ಮ ರಾಜ್ಯಕ್ಕೆ ಸಹಾಯ ಮಾಡೋಕೆ ಯಾಕೆ ಇಷ್ಟು ವಿರೋಧ? ನಮ್ಮ ರಾಜ್ಯದ ಬಡವರಿಗೆ ಅಕ್ಕಿ ಕೊಡೋದಿಲ್ಲ ಎನ್ನೋದು ದ್ವೇಷದ ರಾಜಕೀಯ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!