ಕೆಲವೊಮ್ಮೆ ಜೀವನದಲ್ಲಿ ಎಲ್ಲವೂ ನೀವಂದುಕೊಂಡಂತೆ ಆಗೋದಿಲ್ಲ, ಕೆಲವೊಮ್ಮ ಅಲ್ಲ ಹಲವೊಮ್ಮೆ ಅಂದುಕೊಂಡಂತೆ ಬದುಕು ಇರೋದಿಲ್ಲ, ಹಾಗಂತ ಇರುವ ಲೈಫ್ನ್ನು ಬಿಟ್ಟು ಎಲ್ಲಿಗೆ ಎಸ್ಕೇಪ್ ಆಗ್ತೀರಿ? ಆದ್ರೂ ಮತ್ತೆ ಬರಲೇ ಬೇಕಲ್ಲಾ? ನಿರಾಸೆಯಾದಾಗ ನಿಮ್ಮನ್ನು ನೀವು ಹೀಗೆ ಸಂಭಾಳಿಸಿ..
- ಎಲ್ಲಕ್ಕಿಂತ ಮುಖ್ಯವಾಗಿ ಸಂದರ್ಭಕ್ಕೆ ಸಮಯ ನೀಡಿ, ಕೆಲಸದಲ್ಲಿ ಜಗಳ, ಮನೆಯಲ್ಲಿ ಕಲಹ, ನೀವು ಅಂದುಕೊಂಡ ವಿಷಯ ಆಗದೇ ಇರುವಾಗ ಆ ಸಂದರ್ಭಕ್ಕೆ ಸಮಯ ನೀಡಿ. ಆಗಿದ್ದು ಆಗಿದೆ, ಇನ್ನು ಏನು ಮಾಡಲೂ ಆಗದು ಎಂದು ಒಪ್ಪಿ ಸುಮ್ಮನಾಗಿ.
- ಬೇರೆ ಯಾವ ವಿಷಯದ ಮೇಲೆ ಗಮನ ಹರಿಸಿದರೆ ಒಳ್ಳೆಯದು ನೋಡಿ, ಈಗ ಆಫೀಸ್ನಲ್ಲಿ ಇನ್ಕ್ರೀಮೆಂಟ್ಗಾಗಿ ನೀವು ಕಾಯುತ್ತಿದ್ದು ಅದು ಆಗೋದಿಲ್ಲ ಎಂದಾದರೆ ಬೇರೆ ಕೆಲಸ ನೋಡಿ ಅಥವಾ ಪಾರ್ಟ್ ಟೈಂ ಕೆಲಸ ನೋಡಿ. ಸಂಬಂಧಗಳಲ್ಲಿ ನಿರೀಕ್ಷೆ ಹುಸಿಯಾದಾಗ ನಿಮ್ಮ ಜೀವದಲ್ಲಿ ಆ ವ್ಯಕ್ತಿಯಿಂದ ಆದ ಒಳ್ಳೆ ಘಟನೆಗಳನ್ನು ನೆನೆದು ಕೆಟ್ಟದ್ದನ್ನು ಅಲ್ಲಿಗೇ ಬಿಟ್ಟುಬಿಡಿ.
- ನಿಮ್ಮ ನಿರೀಕ್ಷೆಯಲ್ಲೇ ದೋಷ ಇದೆಯಾ? ಯೋಚಿಸಿ ಸಾಧ್ಯವೇ ಇಲ್ಲ ಎನ್ನುವಂಥದ್ದನ್ನು ನಿರೀಕ್ಷೆ ಮಾಡಿಕೊಂಡು ಕೂತಿದ್ದೀರಾ? ಅದೇ ನಿಜವಾದರೆ ನಿಮ್ಮ ನಿರೀಕ್ಷೆಯನ್ನೇ ಬದಲಾಯಿಸಿ.
- ನಿಮ್ಮ ನಿರೀಕ್ಷೆ ಹುಸಿಯಾದಾಗ ಈ ನೋವು ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ. ಈ ಸಮಯ ಹೋಗಿಬಿಡುತ್ತದೆ ಆದರೆ ಈ ಸಮಯದಲ್ಲಿ ದೇಹಕ್ಕೆ ಮಾಡಿಕೊಂಡ ಹಾನಿ ಹೋಗೋದಿಲ್ಲ.
- ನಿಮ್ಮ ಮೇಲೆ ಕರುಣೆ ಇಡಿ, ನೀವು ಇನ್ನೂ ಬೆಟರ್ ಆಗೋದು ಹೇಗೆ ಯೋಚಿಸಿ. ಮಾನಸಿಕ ಆರೋಗ್ಯ ಹತೋಟಿಯಲ್ಲಿರಲಿ.
- ಈ ರೀತಿ ನಿರೀಕ್ಷೆ ಹುಸಿಯಾಗಿದ್ದೂ ಖುಷಿಯಾಗಿರೋ ಜನರ ಜೊತೆ ಸಮಯ ಕಳೆಯಿರಿ, ಇದು ಜೀವನದ ಹೊಸ ಪರ್ಸೆಪ್ಷನ್ ನೀಡುತ್ತದೆ.
- ಇದೊಂದು ಕಲಿಕೆ ಎಂದು ಸುಮ್ಮನಾಗಿ, ಸಮಯ ನೀಡಿ ಮತ್ತೆ ಮುಂದೆ ಬನ್ನಿ