ಕೆಲಸ ಮಾಡೋಕೆ ಕಷ್ಟ ಆಗ್ತಿದೆ, ದಯವಿಟ್ಟು ಅನುದಾನ ನೀಡಿ: ಡಿಕೆಶಿ ಕಾಲಿಗೆ ಬಿದ್ದ ಶಾಸಕ ಮುನಿರತ್ನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನಗೆ ಕೆಲಸ ಮಾಡಲು ತುಂಬಾ ಕಷ್ಟವಾಗ್ತಿದೆ, ನನ್ನ ಕ್ಷೇತ್ರಕ್ಕೆ ಬರಬೇಕಾದ ಅನುದಾನ ಬಂದಿಲ್ಲ, ನನ್ನ ಕ್ಷೇತ್ರದ ಅನುದಾನಕ್ಕೆ ಕತ್ತರಿ ಹಾಕಿ ಬೇರೆ ಕಡೆಗೆ ಕೊಡ್ತಿದ್ದಾರೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳದ ಕರೆ ಪೂಜೆಯ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಕಾಲಿಗೆ ಮುನಿರತ್ನ ಬಿದ್ದಿದ್ದಾರೆ.

ಈ ವರ್ಷ ಚುನಾವಣಾ ಫಲಿತಾಂಶ ಬಂದಾಗಿನಿಂದಲೂ ಕಷ್ಟ ಅನುಭವಿಸುತ್ತಲೇ ಇದ್ದೀನಿ. ಕೆಲಸ ಮಾಡಿಸಲು ಹಣ ಬೇಕು ದಯವಿಟ್ಟು ಅನುದಾನ ಬಿಡುಗಡೆ ಮಾಡಿ ಎಂದಿದ್ದಾರೆ.

ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೇದಿಕೆ ಮುಂಭಾಗ ಬಂದು ಮುನಿರತ್ನ ಗದ್ದಲ ಎಬ್ಬಿಸಿದ್ದಾರೆ. ಯಾರೋ ಡ್ರಾಮಾ ಮಾಡೋಕೆ ಬಂದಿದ್ದಾರೆ, ಅವರ ಡ್ರಾಮಾ ಆಮೇಲೆ ನೋಡೋಣ ಬಂದಿರುವ ಕೆಲಸ ಮಾಡೋಣ ಎಂದು ಡಿಕೆಶಿ ಟಾಂಗ್ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!