ಹೊಸದಿಗಂತ ವರದಿ, ವಿಜಯಪುರ:
ಗಾಂಧಿ ಕುಟುಂಬಕ್ಕೆ ಸಂತರ ಶಾಪ ಇರುವುದು ನಿಜ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಮಾಡುವ ಆಶ್ವಾಸನೆ ನೀಡಿದ್ದರು. ಅದು ಗೋಹತ್ಯೆ ನಿಷೇಧ ಮಾಡದೆ ಇದ್ದಾಗ ಮುನಿಗಳು ಹೋರಾಟ ಮಾಡಿದ್ದರು. ಆಗ ಇಂದಿರಾ ಗಾಂಧಿ ಅವರ ಮೇಲೆ ಗುಂಡು ಹಾರಿಸಿದ್ರು. ಆಗ ಸಂತರು ಶಾಪ ನೀಡಿದ್ದಾರೆ. ನಮ್ಮನ್ನ ಹೇಗೆ ರಸ್ತೆಯ ಮೇಲೆ ಕೊಂದಿದ್ದಿರೋ ಹಾಗೇ ನಿಮ್ಮ ಕುಟುಂಬದವರಿಗೂ ಆಗಲಿ ಎಂದು ಶಾಪವಿದೆ. ಹೀಗಾಗಿ ರಾಜೀವ್ ಗಾಂಧಿ, ಇಂದಿರಾ ಗಾಂಧಿಗೂ ಶಾಪ ಇದೆ. ಇನ್ನು ರಾಹುಲ್ ಗಾಂಧಿಗೂ ಶಾಪವಿದೆ. ಹೀಗಾಗಿ ರಾಹುಲ್ ಗಾಂಧಿ ಪರಿಸ್ಥಿತಿ ಹೀಗಾಗಿದೆ. ಶಾಪದಿಂದಲೇ ರಾಹುಲ್ ಗಾಂಧಿಗೆ ಮದುವೆ ಆಗಿಲ್ಲ.
ಶಾಪದಿಂದಲೇ ಅದು ಎಲ್ಲಿ ಇರೋತ್ತೋ, ಹೇಗಿರುತ್ತೋ, ಎಲ್ಲಿ ದೇಶ ಬಿಟ್ಟು ಹೋಗುತ್ತೊ ಗೊತ್ತಿಲ್ಲ ಎಂದು ದೂರಿದರು.
ಶಾಪ ಕ್ರಮೇಣವಾಗಿ ಕುಟುಂಬವನ್ನ ನಾಶ ಮಾಡುತ್ತ ಹೋಗುತ್ತದೆ. ಗಾಂಧಿ ಕುಟುಂಬದ ನಾಶಕ್ಕೂ ಶಾಪವಿದೆ ಎಂದರು.