ಜಗನ್ ರೆಡ್ಡಿ ಅಹಂಕಾರಿ, ಸೈಕೋ, ಸ್ಯಾಡಿಸ್ಟ್: ಆಂಧ್ರ ಸಿಎಂ ವಿರುದ್ಧ ಚಂದ್ರಬಾಬು ನಾಯ್ಡು ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು “ಅಹಂಕಾರಿ, ಸೈಕೋ, ಸ್ಯಾಡಿಸ್ಟ್, ವಿಧ್ವಂಸಕ ಮತ್ತು ಲೂಟಿಕೋರ” ಎಂದು ಕರೆದ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು, ವೈಎಸ್‌ಆರ್‌ಸಿಪಿ ಮುಖ್ಯಸ್ಥರು ಅವಕಾಶಗಳನ್ನು ಕೊಲ್ಲುವ ಮೂಲಕ ರಾಜ್ಯದ ಐದು ಕೋಟಿ ಜನರ ಭವಿಷ್ಯವನ್ನು ನಾಶಪಡಿಸುತ್ತಿದ್ದಾರೆ ಎಂದು ಹೇಳಿದರು.

ಸಂದರ್ಶನದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, “ಜಗನ್ ರೆಡ್ಡಿ ಒಬ್ಬ ಅಹಂಕಾರಿ. ಸೈಕೋ ಸ್ವಭಾವ, ಸ್ಯಾಡಿಸ್ಟ್ ಮತ್ತು ಅವರು ವಿಧ್ವಂಸಕ, ಲೂಟಿಕೋರರು. ಎಂದು ಹೇಳಿದ್ದಾರೆ.

ಅಮರಾವತಿಯ ಪ್ರಜಾ ವೇದಿಕೆ, ಸಭಾಂಗಣವನ್ನು ಧ್ವಂಸಗೊಳಿಸಿದ್ದಕ್ಕಾಗಿ ಆಂಧ್ರ ಮುಖ್ಯಮಂತ್ರಿಯನ್ನು ಟೀಕಿಸಿದ ಚಂದ್ರಬಾಬು ನಾಯ್ಡು, ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ರಾಜ್ಯಕ್ಕೆ ಪ್ರಯೋಜನಕಾರಿಯಾದ ಪ್ರಮುಖ ಯೋಜನೆಗಳು ಮತ್ತು ಮೂಲಸೌಕರ್ಯಗಳನ್ನು ನೀಡಲಿಲ್ಲ ಎಂದು ಹೇಳಿದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!