ಹೊಸದಿಗಂತ ವರದಿ ಧಾರವಾಡ:
ಇಡೀ ದೇಶದ ಗಮನ ಸೆಳೆದ ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ನಾಲ್ಕು ಸುತ್ತಿನ ಮತ ಎಣಿಕೆ ಮುಗಿದಿದೆ. ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿ ವಿರುದ್ಧ ಸಮರ ಸಾರಿದ ಜಗದೀಶ್ ಶೆಟ್ಟರ್ 14,705 ಮತ ಪಡೆದರೆ, 22,201 ಮತ ಪಡೆದ ಬಿಜೆಪಿಯ ತೆಂಗಿನಕಾಯಿ 7,496 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಇದೇ ಅಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸದರೆ, ಸುಮಾರು 20 ಸಾವಿರ ಮತಗಳ ಅಂತರ ಗೆಲವು ದಾಖಲಿಸಲಿದೆ. ಆದರೆ, ಇನ್ನೂ 15 ಸುತ್ತುಗಳ ಮತ ಎಣಿಕೆ ಕಾರ್ಯ ಬಾಕಿ ಇದ್ದು, ವಿಜಯ ಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎಂಬುದು ಮಾತ್ರ ಕುತೂಹಲ ಮೂಡಿಸಿದೆ.