ಜೈಲ್ ಕಾ ಜವಾಬ್ ವೋಟ್ ಸೆ: ಕೇಜ್ರಿ ಬಂಧನ ಖಂಡಿಸಿ ಅಭಿಯಾನ ಆರಂಭಿಸಿದ ಆಮ್ ಆದ್ಮಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣಾ ಪ್ರಚಾರ ತೀವ್ರಗೊಂಡಿರುವ ನಡುವೆಯೇ ಆಮ್ ಆದ್ಮಿ ಪಕ್ಷ ’ಜೈಲ್ ಕಾ ಜವಾಬ್ ವೋಟ್ ಸೆ’ (ಜೈಲಿಗೆ ಹಾಕಿದ್ದಕ್ಕೆ ಉತ್ತರ ಮತದ ಮೂಲಕ ) ಅಭಿಯಾನ ಆರಂಭಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಕ್ಷದ ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಧಿಕಾರದಲ್ಲಿರುವ ಒಬ್ಬ ಮುಖ್ಯಮಂತ್ರಿಯ ಬಂಧನವಾಗಿರುವುದು ಇದೇ ಮೊದಲು. ಹೀಗಾಗಿ ಸೋಮವಾರದಿಂದಲೇ ನಾವು ಈ ಅಭಿಯಾನ ಆರಂಭಿಸುತ್ತಿದ್ದೇವೆ ಎಂದಿದ್ದಾರೆ.
ಎಎಪಿ ನಾಯಕರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿರುವ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದ್ದಾರೆ. ಇದು ಅಭಿಯಾನದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಜನತೆ ಎಎಪಿಗೆ ಮತ ನೀಡುವ ಮೂಲಕ ’ಸರ್ವಾಧಿಕಾರ’ಕ್ಕೆ ಪ್ರತ್ಯುತ್ತರ ನೀಡಬೇಕು, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ’ಮತ ಚಲಾಯಿಸುವಾಗ ಕೇಜ್ರಿವಾಲ್ ಅವರನ್ನು ನೆನಪು ಮಾಡಿಕೊಳ್ಳಿ’ ಎಂದು ಇದೇ ಸಂದರ್ಭ ಜನರಲ್ಲಿ ಆಪ್ ಮುಖಂಡರು ಮನವಿ ಮಾಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!