ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್ ಸಿನಿಮಾ ರಂಗಕ್ಕೆ ಈಸಿಯಾಗಿ ಎಂಟ್ರಿ ಪಡೆದಿದ್ದಾರೆ. ಆದರೆ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಮೂಲಕ ರಾಷ್ಟ್ರಪ್ರಶಸ್ತಿ ಪಡೆದು ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ.
ಆದರೆ ಈ ಪ್ರಶಸ್ತಿಯನ್ನು ಲಾಭಿ ಮಾಡಿ ಪಡೆದಿದ್ದಾರೆ ಎಂದು ನಟಿ ಕಂಗನಾ ರಣೌತ್ ಇಂಡೈರೆಕ್ಟ್ ಆಗಿ ಹೇಳಿ ಅಪಹಾಸ್ಯ ಮಾಡಿದ್ದಾರೆ. ಇದು ಆಲಿಯಾ ಭಟ್ ಫ್ಯಾನ್ಸ್ಗೆ ಬೇಸರ ತರಿಸಿದೆ.
ನನಗೆ ಬಂದಿರುವ ಅವಾರ್ಡ್ ಜೆನ್ಯೂನ್, ನನ್ನನ್ನು ನೋಡಿ ತನಗೂ ಅವಾರ್ಡ್ ಬೇಕು ಎಂದು ಲಾಭಿ ಮಾಡಿ ಅವಾರ್ಡ್ ಪಡೆದಿದ್ದಾರೆ ಎಂದು ಪರೋಕ್ಷವಾಗಿ ಆಲಿಯಾ ಬಗ್ಗೆ ಕಂಗನಾ ಮಾತನಾಡಿದ್ದಾರೆ.
ಬಾಲಿವುಡ್ನಲ್ಲಿ ಕಂಗನಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಿನಿ ರಂಗದಲ್ಲಿ ನಡೆಯುವ ಸಣ್ಣ ಪುಟ್ಟ ತಪ್ಪುಗಳನ್ನು ಎತ್ತಿ ಹಿಡಿದು ತೋರಿಸುತ್ತಾರೆ. ಕಂಗನಾ ಫ್ಯಾನ್ಸ್ ನಿಜ ಇರಬಹುದು ಎಂದಿದ್ದು, ಆಲಿಯಾ ಫ್ಯಾನ್ಸ್ ಮಾತ್ರ ಗರಂ ಆಗಿದ್ದಾರೆ.