ಭಾರೀ ಭೂಕುಸಿತ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಮರನಾಥ ಯಾತ್ರೆಗೆ ಮತ್ತೊಮ್ಮೆ ವಿಘ್ನ ಎದುರಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಜಮ್ಮುವಿನಿಂದ ಅಮರನಾಥ ಯಾತ್ರೆಗೆ ತೆರಳುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ರಂಬನ್‌ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಬಾಲ್ಟಾಲ್ ದಾರಿ ಮೂಲಕ ಅಮರನಾಥ ದರ್ಶನ ಮಾಡಲು ಹೊರಟ ಯಾತ್ರಿಕರಿಗೆ ಸಮಸ್ಯೆಯಾಗಿದೆ. ಭೂಕುಸಿತ ಜೊತೆ ಹವಾಮಾನ ವೈಪರಿತ್ಯ ಕೂಡ ಯಾತ್ರೆಗೆ ಹಿನ್ನಡೆಯಾಗಿದೆ.

ಶ್ರೀಗನರ- ಜಮ್ಮು ಹೆದ್ದಾರಿ ಬಂದ್ ಮಾಡಲಾಗಿದೆ. ಈ ಕಾರಣದಿಂದ ಮುಂದಿನ ಆದೇಶದವರೆಗೆ ಯಾತ್ರೆ ಸ್ಥಗಿತಗೊಳಿಸಲಾಗಿದೆ.

ಜುಲೈ 1 ರಂದು ಪ್ರಾರಂಭವಾದ 62 ದಿನಗಳ ಅಮರನಾಥ ಯಾತ್ರೆಯು ಆಗಸ್ಟ್ 31, 2023 ರಂದು ಕೊನೆಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!