ಹೊಸದಿಗಂತ ವರದಿ, ಕೊಪ್ಪಳ:
ಜನಾರ್ದನ ರೆಡ್ಡಿಯವರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳುತ್ತೇವೆ. ಎಲ್ಲಿ ಸ್ಪರ್ಧಿಸಬೇಕು ಎಂಬುದು ಪಕ್ಷ ತೀರ್ಮಾನಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಜೊತೆಗೆ ಮಾತನಾಡಿರುವೆ. ಅವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವ ಮಾತಿಲ್ಲ. ಅವರ ಮೇಲೆ ಸಣ್ಣಪುಟ್ಟ ಪ್ರಕರಣಗಳಿದ್ದು, ಅವು ಬಗೆಹರಿದ ಮೇಲೆ ಬಿಜೆಪಿಗೆ ಮರಳಲಿದ್ದಾರೆ. ಪಕ್ಷ ಕಟ್ಟಲು ಅವರು ಸಹಕರಿಸುತ್ತಾರೆ. ಪಕ್ಷದ ಮುಖಂಡರೂ ಅವರ ಪರವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ. ಗಂಗಾವತಿ ಯಲ್ಲಿ ಮನೆ ಮಾಡಿದ್ದಾರೆ. ಆದರೆ, ಪಕ್ಷ ಸೂಚಿಸಿದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ