ಹೊಸ ದಿಗಂತ ವರದಿ, ಕಲಬುರಗಿ:
ಅಖಿಲ ಕನಾ೯ಟಕ ಬ್ರಾಹ್ಮಣ ಅಚ೯ಕರ ಮತ್ತು ಪುರೋಹಿತರ ವತಿಯಿಂದ ಜ.9ರಂದು ಬ್ರಾಹ್ಮಣ ಅಚ೯ಕ ಮತ್ತು ಪುರೋಹಿತರ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಾಗೂ ಲೋಕ ಕಲ್ಯಾಣಕ್ಕಾಗಿ ದತ್ತಮಾಲಾ ಮಂತ್ರ ಹೋಮವನ್ನು ಜಿಲ್ಲೆಯ ಅಫಜಲಪುರ ತಾಲೂಕಿನ ಶ್ರೀಕ್ಷೇತ್ರ ಗಾಣಗಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಗುಂಡಾಚಾಯ೯ ಜೋಶಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.9ರಂದು ಬೆಳಿಗ್ಗೆ 7 ಗಂಟೆಗೆ ದತ್ತಾತ್ರೇಯರಿಗೆ ಫಲ ಸಮಪ೯ಣೆ, ಬೆಳಿಗ್ಗೆ 7-30ರಿಂದ ಗಣಪತಿ ಪೂಜೆ, ಚತುವೇ೯ದ,ಪಾರಾಯಣ, ಉಪನಿಷತ್ ಪಾರಾಯಣ, ಗೀತಾ ಪಾರಾಯಣ ಹಾಗೂ ದತ್ತಮಾಲಾ ಮಂತ್ರ ಜಪ, ಹವನ ನಡೆಯಲಿದ್ದು, ನಂತರ ಗಾಯತ್ರಿ ದೇವಿಯ ಭಾವಚಿತ್ರದ ಶೋಭಾಯಾತ್ರೆ ಜರಗಲಿದೆ ಎಂದರು.
ಮದ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀ ವೇದಮೂರ್ತಿ ವಿಶ್ವೇಶ್ವರ ಭಟ್, ಶ್ರೀ ಅಶೋಕ್ ಹಾರನಳ್ಳಿ,ಶ್ರೀ ಬಿ.ಎಸ್. ರಾಘವೇಂದ್ರ ಭಟ್, ಶ್ರೀ ವೇದಮೂರ್ತಿ ಭಾನುಪ್ರಕಾಶ್ ಆಗಮಿಸಲಿದ್ದು,ಅನೇಕರು ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದರು.
ಪ್ರಖ್ಯಾತ ಪೂಜಾರಿ, ದತ್ತಾತ್ರೇಯ ಜೋಶಿ, ವಾಸುದೇವ ಕಟ್ಟಿ, ರಘೋತ್ತಮಾಚಾಯ೯ ಘಂಟಿ, ವೆಂಕಟೇಶ್ ಮಾಲಗತ್ತಿ, ಧನಂಜಯಾಚಾಯ೯ ಅಕಮಂಚಿ,ಶ್ರೀನಿವಾಸ ನೆಲೋಗಿ ಸುದ್ದಿಗೋಷ್ಠಿಯಲ್ಲಿದ್ದರು.