ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಕೊನೆಗೂ ಜೆಡಿಎಸ್ ಕಾರ್ಯಕರ್ತ ಸ್ವರೂಪ್ ಪ್ರಶಾಂತ್ ಗೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna), ನನಗೆ ಶಾಸಕ ಸ್ಥಾನ ಮುಖ್ಯವಲ್ಲ, ದೇವೇಗೌಡರ ಆರೋಗ್ಯ ಮುಖ್ಯ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಭವಾನಿಯನ್ನು (Bhavani Revanna) ನಿಲ್ಲಿಸೋಕೆ ಅಭಿಪ್ರಾಯಪಟ್ಟಿದ್ದರು. ಆದರೆ ಭವಾನಿ ನನ್ನ ಮಾವರ ಆರೋಗ್ಯ ಮುಖ್ಯ ಎಂದಿದ್ದಾರೆ. ನನಗೆ ಯಾವುದೇ ಬೇಸರವಿಲ್ಲ. ದೇವೆಗೌಡರ ಆದೇಶ ತಪ್ಪಿಲ್ಲ ಎಂದರು. ನನಗೆ ಬೇಕಾಗಿರೋದು ದೇವೆಗೌಡರ (HD Devegowda) ಆರೋಗ್ಯ. ದೇವೆಗೌಡರು ಏನ್ ಹೇಳ್ತಾರೆ ಅದ್ಕೆ ಬದ್ಧನೆಂದು ಭವಾನಿ 1 ತಿಂಗಳ ಮುಂಚೆಯೇ ಹೇಳಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ (HD Kumaraswamy), ದೇವೇಗೌಡ ನಿರ್ಧಾರವೇ ಅಂತಿಮ. ಜಿಲ್ಲೆಯಲ್ಲಿ ನಮ್ಮ ಪಕ್ಷ ಉಳಿಬೇಕು. ಕುಟುಂಬದ ತೀರ್ಮಾನದಂತೆ ಸ್ವರೂಪ್ಗೆ ಟಿಕೆಟ್ ಕೊಡ್ತಿದ್ದೇವೆ. ಹಾಸನದಲ್ಲಿ (Hassan) 4 ವರ್ಷದಿಂದ ಬಿಜೆಪಿ ಲೂಟಿ ಮಾಡಿದ್ದಾರೆ. ಹಾಸನದಲ್ಲಿ 7 ಕ್ಕೆ 7 ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.