ಅಪ್ಪುಗೆ ಅಭಿಮಾನದ ಅಪ್ಪುಗೆ: ಮೈಸೂರು ಅರಮನೆಯ ಮುಂದೆ ‘ಬೊಂಬೆ ಹೇಳುತೈತೆ’ ಕೇಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ ದಿನಾಚರಣೆ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಭಿಮಾನಿಯೋರ್ವರು ಮತ್ತಷ್ಟು ಮೆರುಗು ನೀಡಿದ್ದಾರೆ.
ಅಭಿಮಾನಿಯೋರ್ವರ ಕೈಯಲ್ಲಿ ಮೈಸೂರು ಅರಮನೆ ಮುಂದೆ ಅರಳಿರುವ ಪುನೀತ್ ಅವರ ಸುಂದರ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ’ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ…’ ಹಾಡನ್ನೂ ಸೇರಿಸಲಾಗಿದ್ದು, ಭಾವುಕರನ್ನಾಗಿಸುತ್ತಿದೆ. ನೀನೇ ರಾಜಕುಮಾರ” ಎನ್ನುವ ಹಾಡನ್ನು ಹಾಕಿದ್ದು, ಇದಕ್ಕೆ ಪ್ರತಿಕ್ರಿಯೆಗಳ ಸರಮಾಲೆಯೇ ಹರಿದುಬರುತ್ತಿದೆ. ಅಂದಹಾಗೆ ಈ ಅಭಿಮಾನಿಯ ಹೆಸರೂ ಕೂಡಾ ಪುನೀತ್ ಆಗಿದ್ದು, ನಮ್ಮ ಮನೆಯವರು ಈ ಚಿತ್ರವನ್ನು ಅಪ್ಪು ಅವರಿಗಾಗಿ ಬಿಡಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!