ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಮಲಚಿರ ಎ.ಅಯ್ಯಪ್ಪ ಅವರನ್ನು ವರ್ಗಾವಣೆ ಮಾಡಿರುವ ಸರಕಾರ, ನೂತನ ಎಸ್.ಪಿ.ಯಾಗಿ ಕೆ.ರಾಮರಾಜನ್ ಅವರನ್ನು ನೇಮಕ ಮಾಡಿದೆ.
ಎಂ.ಎ. ಅಯ್ಯಪ್ಪ ಅವರನ್ನು ಗುಪ್ತಚರ ವಿಭಾಗದ ಎಸ್ಪಿಯಾಗಿ ನೇಮಕ ಮಾಡಲಾಗಿದ್ದು, ತೆರವಾದ ಸ್ಥಾನಕ್ಕೆ ಬೆಂಗಳೂರು ನಗರ ಪೊಲೀಸ್ನ ಕಮಾಂಡ್ ಸೆಂಟರ್’ನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮರಾಜನ್ ಅವರನ್ನು ನೇಮಿಸಲಾಗಿದೆ.